ಶುಕ್ರವಾರ, ಡಿಸೆಂಬರ್ 21, 2012

ಗಾಂಧಿಗೂ ಒಬ್ಬ Lover ಇದ್ದಳು!

ಗಾಂಧಿಗೂ ಒಬ್ಬ Lover ಇದ್ದಳು!


ಗಾಂಧೀಗೂ ಒಂದು ಅಫೇರ್ ಇತ್ತು!? ಮಕ್ಕಳೂ ಆಗಿದ್ದರು!! ಇತ್ತ,ಗಾಂಧೀಜಿಯನ್ನೇ ಮೋಹಪರವಶಗೊಳಿಸಿದ ಆಕೆಗೂ ಮದುವೆಯಾಗಿತ್ತು.ಮಕ್ಕಳಿದ್ದರು.ಅಷ್ಟೇ ಅಲ್ಲಾ, ಅಕೆಯ ಗಂಡ ಗಾಂಧೀಜಿಯನ್ನು,ಅವರ ನಾಯಕತ್ವವನ್ನು ಬಹುವಾಗಿ ಮೆಚ್ಚಿಕೊಂಡಿದ್ದ. ಇವತ್ತು ಗಾಂಧೀಜಿಯನ್ನು ಯುಗಪುರುಷ, ದೈವಾಂಶಸಂಭೂತ,ರಾಷ್ಟ್ರಪಿತ ಎಂದಷ್ಟೇ ಭಾವಿಸಿರುವವರಿಗೆ ಈ ಅಫೇರ್ ನ ಸುದ್ದಿ ವಿಚಿತ್ರವಾಗಿ ಕಾಣಬಹುದು.ಶಾಕ್ ನೀಡಬಹುದು.ವಿಪರ್ಯಾಸ ಅನ್ನಿಸಬಹುದು.ಅಥವಾ ನಂಬಲು ಸಾಧ್ಯವೇ ಇಲ್ಲ ಎಂದು ಉದ್ಗರಿಸುವಂತೆ ಮಾಡಲೂಬಹುದು. ಆದರೆ, ಗಾಂಧೀಜಿಗೂ ಒಂದು ಅಫೇರ್ ಇತ್ತೆಂಬುದು ಸ್ಪಷ್ಟ. ಅಂಥ ಗಾಧೀಜಿಯೇ ಕೆಲ ವರ್ಷಗಳ ಮಟ್ಟಿಗೆ ಹೆಣ್ಣೋಬ್ಬಳ ಮೋಹದಲ್ಲಿ ಮುಳುಗಿದ್ದರು ಎಂಬುದು ಅಷ್ಟೇ ಸತ್ಯ! ಆಕೆ ಸರಳದೇವಿ ಗಾಂಧೀಜಿಯ ಮನಸು ಕದ್ದು, ಕೆಲ ಕಾಲದ ಮಟ್ಟಿಗೆ ಅವರಿಗೆ ಸ್ಫೂರ್ತಿ ದೇವತೆಯೇ ಆಗಿದ್ದಾಕೆಯ ಹೆಸರು ಸರಳಾದೇವಿ. ಆಕೆ ಬೇರೆ ಯಾರು ಅಲ್ಲ.ರವೀಂದ್ರನಾಥ ಟ್ಯಾಗೋರ್ ಅವರ ತಂಗಿಯ ಮಗಳು.ಆ ಕಾಲಕ್ಕೇ ಆಕೆ ಭುವನ ಸುಂದರಿ! 'ಬಂಗಾಳದ ಜೋನ್ ಆಫ್ ಆರ್ಕ್' ಎಂಬ ಬಿರುದೇ ಆಕೆಗಿತ್ತು. ಆ ಕಾಲಕ್ಕೇ ಆಕೆ ಪದವಿ ಪದೆದಿದ್ದಳು. ಲೇಖಕಿಯಾಗಿ ಹೆಸರು ಮಾಡಿದ್ದಳು ಮತ್ತು ಮಧುರಾತಿಮಧುರವಾಗಿ ಹಾಡುತ್ತಿದ್ದಳು.

ಯಾವುದೆ ಸಮಾರಂಭವಿರಲಿ,ಅಲ್ಲಿ ಸರಳಾದೇವಿ ಬಂದಿದ್ದಾಳೆ ಎಂದರೆ ಜನ ಜಾತ್ರೆಯೇ ಸೇರಿಬಿಡುತ್ತಿತ್ತು. ಎಲ್ಲರೂ ಆಕೆಯ ಚೆಲುವನ್ನು ಆರಾಧಿಸುವವರೇ. ಆ ದಿನಗಳಲ್ಲಿ ಪ್ರಮುಖನಾಯಕರು ಅನಿಸಿಕೊಂಡಿದ್ದ ಪ್ರತಿಯೊಬ್ಬರೂ ಸರಳಾದೇವಿಯ ಸಾಂಗತ್ಯಕ್ಕಾಗಿ ಹಾತೊರೆಯುತ್ತಿದ್ದರು.ಕೆಲವರಂತೂ ಆಕೆಗಾಗಿ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ದರಾಗಿದ್ದರು! ಇಂಥ ಸುರಸುಂದರಿಗೆ ಗಾಂಧೀಜಿಯೂ ಮರುಳಾದರು ಅಂದರೆ ಅದರಲ್ಲಿ ಅಚ್ಚರಿ ಏನಿದೆ? 1901ರಲ್ಲಿ ಕೋಲ್ಕತ್ತಾದಲ್ಲಿ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿಯೂ ಬಂದಿದ್ದರು.ಆಗ ಸರಳಾದೇವಿಗೆ 29 ವರ್ಷ. ಇನ್ನೂ ಮದುವೆಯಾಗಿರಲಿಲ್ಲ. ಆ ಹೊತ್ತಿಗೇ ಆಕೆ ಗಾಯಕಿ ಮತ್ತು ಲೆಖಕಿಯಾಗಿ ಹೆಸರು ಮಡಿದ್ದರು. 'ಭಾರತಿ' ಹೆಸರಿನ ಪತ್ರಿಕೆಯನ್ನೂ ಹೊರತರುತಿದ್ದರು. ಸರಳಾದೇವಿ ರಾಗ ಸಂಯೋಜಿಸಿದ್ದ ಗೀತೆಯೊಂದನ್ನು 58ಮಂದಿ ಗಾಯಕ/ಗಾಯಕಿಯರು ಒಟ್ಟಾಗಿ ಹಾಡುವ ಮೂಲಕವೇ ಅಧಿವೇಶನ ಆರಂಭವಾಗಿತ್ತು. ಇದು ಗಾಂಧೀಜಿ ಮತ್ತು ಸರಳಾದೇವಿಯವರ ಮೊದಲ ಭೇಟಿ. ಈ ಸಂದರ್ಭದಲ್ಲಿ ಇಬ್ಬರು ಮದ್ಯೆ ವಿಶೇಷ ಮಾತುಕತೆ,ಪರಸ್ಪರ ಮೆಚ್ಚುಗೆಯ ಮಾತು ಎರಡೂ ಕೇಳಿಬರಲಿಲ್ಲ.ಆದರೆ, ಆ ಹೊತ್ತಿಗಾಗಲೇ ಆಫ್ರಿಕಾದಲ್ಲಿ ವರ್ಣಬೇಧನೀತಿಯ ವಿರುದ್ದ ಸಮರ ಸಾರಿ ಹೆಸರಾಗಿದ್ದ ಗಾಂಧೀಜಿಯಿಂದ ಒಂದು ಲೇಖನ ಬರಸಿದರೆ ಹೇಗೆ ಎಂಬ ಯೋಚನೆ ಸರಳಾದೇವಿಗೆ ಬಂತಂತೆ. ಮುಂದೆ,1940ರಲ್ಲಿ ಬರೆದ ಪುಸ್ತಕವೊಂದರಲ್ಲಿ ಆಕೆಯೇ ಹೀಗೆ ಹೇಳಿಕೋಂಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಸರಳಾದೇವಿಯವರ ತಂದೆ ಜಾನಕಿನಾಥ ಗೋಸಾಲ್ ಅವರು ಗಾಂಧೀಜಿಗೆ ಪರಿಚಿತರೇ ಆಗಿದ್ದರು.ಅವರು ಕಾಂಗ್ರೆಸ್ ಕಾರ್ಯದರ್ಶಿಯೂ ಆಗಿದ್ದರು.ಬಾಲ್ಯದಿಂದಲೂ ಮನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು,ಸ್ವಾತಂತ್ರ್ಯ ಸಂಗ್ರಾಮದ ಮಾತುಗಳನ್ನು ಕೇಳಿಕೊಂಡು ಬೆಳೆದ ಪರಿಣಾಮ-ಸರಳಾದೇವಿ ಕೂಡ ಸ್ವಾತಮತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡುತಿದ್ದ ಯುವಕರಿಗೆ ಬಹಿರಂಗವಾಗಿ ಪ್ರೋತ್ಸಾಹ ನೀಡುವ ಮೂಲಕ ಪೊಲೀಸರ ಕೆಂಗಣ್ಣಿಗೂ ಬಿದ್ದಿದ್ದರು. ಇಂಥ ಹಿನ್ನೆಲೆಯ ಸರಳಾದೇವಿಗೆ1905 ರಲ್ಲಿ ಪಂಜಾಬ್ ನ ರಾಮ್ ಭುಜ್ ದತ್ ಚೌಧುರಿ ಎಂಬಾತನೊಂದಿಗೆ ಮದುವೆಯಾಯಿತು. ಆರ್ಯ ಸಮಾಜಿಯಾಗಿದ್ದ ಚೌಧುರಿಗೆ ಇದು ಮೂರನೇ ಮದುವೆ. ಮೊದಲ ಇಬ್ಬರು ಹೆಂಡಿರೂ ತೀರಿಕೊಂಡಿದ್ದರು. ಸ್ವಾರಸ್ಯವೆಂದರೆ ರಾಮ್ ಭುಜ್ ದತ್ ಚೌದುರಿ ಕೂಡ 'ಹಿಂದುಸ್ತಾನ್' ಹೆಸರಿನ ಪತ್ರಿಕೆಯನ್ನು ಹೊರತರುತಿದ್ದರು. ಪಂಜಾಬ್ ಆಗ ಲಾಹೋರ್ ಗ ಸೇರಿ ಕೊಂಡಿತ್ತು.ಮಗಳು ಬಂಗಾಳದಲ್ಲಿದ್ದು ಪೊಲೀಸರ ಕೆಂಗಣ್ಣಿಗೆ ಬೀಳುವುದಕ್ಕಿಂತ ಲಾಹೋರ್ ನಲ್ಲಿ ಗಂಡನ ಮನೆಯಲ್ಲಿ ಸುಖವಾಗಿರಲಿ ಎಂದೇ ಆಕೆಯ ತಾಯಿ-ತಂದೆ ಇಚ್ಚಿಸಿದ್ದರು. 1901ರಲ್ಲಿ ಪರಿಚಯವಾಯ್ತಲ್ಲ, ಅಂದನಿಂದ 1919ರವರೆಗೆ ಗಾಂಧೀಜಿ ಮತ್ತು ಸರಳದೇವಿಯರ ಸಂಬಂಧ ಹೇಗಿತ್ತು `ಎಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ. 1919ರಲ್ಲಿ ಲಾಹೋರ್ ಗೆ ಬರುತ್ತಾರೆ ಗಾಂಧೀಜಿ. ಆ ಸಮಯದಲ್ಲಿ ಸರಳಾದೇವಿಯ ಪತಿ ರಾಮ್ ಭುಜ್ ದತ್ ಚೌಧುರಿ ಜೈಲು ಸೇರಿರುತ್ತಾರೆ. ಆ ಸಂದರ್ಭದಲ್ಲಿ ಸರಳಾದೇವಿಯನ್ನು ಭೇಟಿಯಾಗುವ ಗಾಂಧಿಜಿ, ಕೆಲ ದಿನಗಳ ನಂತರ ಸಾಬರಮತಿ ಆಶ್ರಮದ ಅನುಸೂಯಾ ಬೆನ್ ಎಂಬಾಕೆಗೆ ಹೀಗೆ ಬರೆಯುತ್ತಾರೆ: 'ಇಲ್ಲಿ ಸರಳಾದೇವಿ ನನ್ನನ್ನು ಚೆನ್ನಾಗಿ, ತುಂಬಾ ಚೆನ್ನಾಗಿ ನೋಡಿಕೊಳ್ತಾ ಇದ್ದಾಳೆ.ಆಕೆಯ ಸಾನಿಧ್ಯದ ನನ್ನಲ್ಲಿ ಹೊಸ ಉತ್ಸಾಹ ತುಂಬಿದೆ.ನನ್ನ ಪಾಲಿಗಂತ್ತೂ ಆಕೆ ಸ್ಫೂರ್ತಿ ದೇವತೆಯೇ ಆಗಿದ್ದಾಳೆ'.... ಮುಂದೆ 1920ರ ಹೊತ್ತಿಗೆ ಗಾಂಧೀಜಿಯ ಮಾತು ಸಂಪೂರ್ಣವಾಗಿ ಬದಲಾಗುತ್ತದೆ 'ಸರಳಾದೇವಿ ಮತ್ತು ನಾನು ಮಾನಸಿಕವಾಗಿ ಮದುವೆಯಾಗಿದ್ದೇವೆ' ಅಂದುಬಿಡುತ್ತಾರೆ!

'ಸರಳಾದೇವಿಯೂ, ನಾನೂ ಮಾನಸಿಕವಾಗಿ ಒಂದ್ದಾಗಿದ್ದೇವೆ' ಎಂದು ಘೋಷಿಸಿದರಲ್ಲ ಆಗ ಸರಳಾದೇವಿಗೆ 47 ವರ್ಷ. ಆದರೇನಂತೆ? ಆಕೆಯ ಚೆಲುವು ಒಂದಿನಿತೂ ಮಾಸಿರಲಿಲ್ಲ. ಆ ನಡುವಯಸ್ಸಿನಲ್ಲೂ ಆಕೆ ಅಪ್ಸರೆಯಂತೆ ಕಾಣುತಿದ್ದಳು.ಮಧುರವಾಗಿ ಹಾಡುತಿದ್ದಳು. ಮುದ್ದಾಗಿ ಬರೆಯುತಿದ್ದಳು.ಜೊತೆಗಿರುವವರಿಗೆ ಇಷ್ತವಾಗುವಂತೆಯೇ ನಡೆದುಕೊಳ್ಳುತ್ತಿದ್ದಳು. ಸರಳಾದೇವಿಯ ಈ ವರ್ತನೆ ಗಾಂಧೀಜಿಗೆ ಎಷ್ಟೊಂದು ಇಷ್ಟವಾಯಿತು ಅಂದರೆ ಪತ್ನಿ ಕಸ್ತೂರಿಬಾ ಅವರನ್ನು ಈಕೆಯೊಂದಿಗೆ ಕ್ಷಣ ಕ್ಷಣವೂ ಹೋಲಿಸಿ ನೋಡುತಿದ್ದರು. ಪ್ರತಿ ಸಂದರ್ಭದಲ್ಲೂ ಅವರ ಮನಸ್ಸು ಸಹಜವಾಗಿಯೇ ಸರಳಾದೇವಿಗೆ ಹೆಚ್ಚು ಅಂಕ ಕೊಡುತಿತ್ತು! ಮುಂದೆ, 1935ರಲ್ಲಿ ಅಮೆರಿಕಾದ ಹೆಸರಾಂತ ಬರಹ ಗಾರ್ತಿ ಮಾರ್ಗರೇಟ ಸಿಂಗರ್ ಅವರೊಂದಿಗೆ ಮಾತಾಡುತ್ತಾ ಗಾಂಧೀಜಿ ಹೀಗೆ ಹೇಳಿದ್ದಾರೆ; 'ನಿಮಗೂ ಗೊತ್ತಿರಬಹುದು; ಕಸ್ತೂರಿಬಾ ಅನಕ್ಷರಸ್ಥೆ, ಸಾಧಾರಣ ಸುಂದರಿ, ವಿದೇಶಿ ಸಂಸ್ಕೃತಿಯ ಗಂಧ-ಗಾಳಿ ಅರಿಯದವಳು. ಆರಂಭದಲ್ಲಿ ಆಕೆಯ ಸಾನ್ನಿದ್ಯ ನನಗೆ ಭೇಡವಾಗಿತ್ತು. ಒಂದು ಸಂದರ್ಭದಲ್ಲಂತೂ ಒಬ್ಬ ಸುಶಿಕ್ಷಿತ, ಸ್ಫುರದ್ರೂಪಿ ಹೆಂಗಸಿನಲ್ಲಿ ನಾನು ಅನುರಕ್ತನಾಗಿಬಿಟ್ಟಿದ್ದೆ.. ಆದರೆ ಅದೃಷ್ಟವಶಾತ್ ಆ ಮೋಹದ ಬಲೆಯಿಂದ ಮುಕ್ತನಾದೆ!' ಗಾಂಧೀಜಿ ಹೇಳಿ ಕೊಂಡ ಆ ಸುಶಿಕ್ಷಿತ ಹೆಂಗಸು ಬೇರೆ ಯಾರೂ ಅಲ್ಲ ಆಕೆಯೇ ಸರಳಾದೇವಿ!


ಇತ್ತ ಸರಳಾದೇವಿ ಕತೆಯೂ ಭಿನ್ನವಾಗಿರಲಿಲ್ಲ. ಆಕೆ ಗಾಂಧೀಜಿಯನ್ನು ಪ್ರೀತಿಸುತಿದ್ದಳು. ಗೌರವಿಸುತಿದ್ದಳು. ಆರಾಧಿಸುತಿದ್ದಳು. ಗಾಂಧೀಜಿ ಜೊತೆಗಿದ್ದಾರೆ ಅಂದರೆ ಆಕೆಯ ಸಂತಸ ಇಮ್ಮಡಿಸುತ್ತಿತ್ತು. ತನ್ನಂತೆಯೇ ಗಾಂಧೀಜಿ ಕೂಡ ಸಂಸಾರಸ್ಥ ಎಂದು ಹೊತ್ತಾದ ನಂತರ ಕೂಡ ಆಕೆಯ ನಿಲುವು ಬದಲಾಗಲಿಲ್ಲ. ಬದಲಿಗೆ, ಮೊದಲ ಹೆಂಡತಿ ತನಗೆ ಸರಿಯಾದ ಜೋಡಿಯಲ್ಲ ಅನಿಸಿದರೆ, ಗಂಡನಾದವನು ಎರಡನೇ ಮದುವೆಯಾದರೆ ತಪ್ಪೇನೂ ಇಲ್ಲ ಎಂದೇ ಆಕೆ ಪದೇಪದೆ ಹೇಳುತಿದ್ದಳು.ಇಂಥ ಸಂದರ್ಭದಲ್ಲೆಲ್ಲ ಗಾಂಧೀಜಿ ಬೇರೆಡೆಲೆ ಮುಖ ತಿರುಗಿಸಿಕೊಂಡು ನಿಂತು ಬಿಡುತ್ತಿದ್ದರು! ಆಕೆ ಬಹುಪತ್ನಿತ್ವದ ಪ್ರತಿಪಾದಕಿ-ಗಾಂಧೀಜಿ ಆ ವಿಷಯದ ಕಟ್ಟಾ ವಿರೋಧಿ. ಹಾಗಿದ್ದರೂ ಇಬ್ಬರ ಮಧ್ಯಒಲವಿನ ಗುಲಾಬಿ ಅರಳಿತು ನಗುತ್ತಲೇ ಇತ್ತು.ಗಾಂಧೀಜಿಯ ಮೇಲಿನ ಪ್ರೇಮದಿಂದಲೇ ಅವರ ಸತ್ಯಾಗ್ರಹ ಚಳುವಳಿ, ಖಾದಿ ಪ್ರಚಾರದ ಸಭೆಗಳಲ್ಲಿ ಸರಳಾದೇವಿ ಪಾಲ್ಗೊಂಳು. ಗಾಂಧೀಜಿಯ ಜೊತೆಜೊತೆಯಲ್ಲೇ ನಡೆದು ಹೋದಳು.


ಗಾಂಧೀಜಿ-ಸರಳಾದೇವಿ ಪ್ರೇಮ ಪ್ರಕರಣ ಪರಾಕಾಷ್ಠೆ ತಲುಪಿದ್ದು ಮತ್ತು ಅಂತ್ಯ ಗೊಂಡದ್ದು 1920 ರಲ್ಲಿ! ಆ ವರ್ಷದ ಆರಂಭದಲ್ಲಿ ಸರಳದೇವಿಯ ಪುತ್ರ ದೀಪಕ್ ಸಾಬರಮತಿ ಆಶ್ರಮಕ್ಕೆ ಬಂದ. ಅದು ವಿಪರೀತ ಶಿಸ್ತಿನ ಆಶ್ರಮ . ತಮಾಷೆಯೆಂದರೆ, ದೀಪಕ್ ಗಾಗಿ ಎಲ್ಲಾ ಕಟ್ಟುಪಾಡುಗಳನ್ನು ಸ್ವತಃಗಾಂದೀಜಿಯೇ ಸಡಿಲಿಸಿ ಬಿಟ್ಟರು! ಮುಂದೆ ಮಾರ್ಚ್ ನಲ್ಲಿ ಸರಳಾದೇವಿಯೇ ಆಶ್ರಮಕ್ಕೆ ಬಂದರು. ಆಗ ಗಾಂದೀಜಿ ಗಂಟೆಗಟ್ಟಲೆ ಆಕೆಯೊಂದಿಗೆ ಹರಟೆಗೆ ಕೂತುಬಿಡುತ್ತಿದ್ದರು. ಪರಿಣಾಮ – ಆ ಹೆಂಗಸಿನ ಜೊತೆ ಬಾಪೂ ಅವರದ್ದು ಎಂಥ ವ್ಯವಹಾರ ಎಂಬಮಾತು ಆಶ್ರಮವಾಸಿಗಳಿಂದಲೇ ಬಂತು.

ವಿಪರ್ಯಸ ಏನೆಂದರೆ- ಸರಳಾದೇವಿಯ ಮೋಹದಲ್ಲಿ ಸಂಪೂರ್ಣ ವಾಗಿ ಮುಳುಗಿದ್ದ ಗಾಂಧೀಜಿಗೆ ಇಂಥಾ ಮಾತುಗಳತ್ತ ಗಮನವೇ ಇರಲಿಲ್ಲ . ಅವರು ಯಾವುದೋ ಧ್ಯಾನಕ್ಕೆ ಬಿದ್ದವರಂತೆ "ಸರಳಾದೇವಿ ನನ್ನ ಶಕ್ತಿ ದೇವತೆ. ಆಕೆ ಮಧುರ ಕಂಠದ ಕೋಗಿಲೆ . ಆಕೆಯ ಜೊತೆಯಲ್ಲಿ ನವಭಾರತ ನಿರ್ಮಾಣ ಸಾಧ್ಯ" ಎಂದೆಲ್ಲಾ ಬರೆದುಬಿಟ್ಟಿದ್ದರು!

ಗಾಂಧೀಜಿಯ ಈ ಪ್ರೇಮದ ಕಥೆ ಚಕ್ರವರ್ತಿ ರಾಜಗೋಪಾಲಾಚಾರಿ, ಗಾಂಧೀಜಿಯ ಕಾರ್ಯದರ್ಶಿಮಹದೇವ ದೇಸಾಯಿ, ಕಸ್ತೂರಿಬಾ,ರವಿಂದ್ರನಾಥ ಟ್ಯಾಗೂರ್ ಎಲ್ಲರಿಗೂ ಗೊತ್ತಿತ್ತು ಗಾಂಧೀಜಿಯನ್ನು ಯಾವ ಸಂದರ್ಭದಲ್ಲೂ ಪ್ರಶ್ನಿಸದಿದ್ದ. ಆಕ್ಷೇಪಿಸದಿದ್ದ ಕಸ್ತೂರಿಬಾ ಈ ವಿಷಯ ತಿಳಿದು ಖಿನ್ನರಾಗಿದ್ದರು. ವಿಪರೀತ ದುಃಖಿಸಿದ್ದರು.ಅವರಿಗಿಂತ ಹೆಚ್ಚಾಗಿ ಗಾಂದಿಜಿಯ ಪುತ್ರ ದೇವದಾಸ್ ಘಾಸಿಗೊಂಡಿದ್ದ.ಸರಳಾದೇವಿಯೊಂದಿಗೆ ಸಂಬಂದ ಮುಂದುವರೆಸುವುದು ಬೇಡವೇ ಬೇಡವೆಂದು ಮೊದಲಿನಿಂದಲೂ ಎಚ್ಚರರಿಸುಲೇ ಇದ್ದರು. ಆದರೆ ಗಾಂಧೀಜಿ ಆ ಮಾತುಗಳಿಗೆ ಕಿವಿಗೊಡುತ್ತಲೇ ಇರಲಿಲ್ಲ. ಯಾವಾಗ ಸಾಬರಮತಿ ಆಶ್ರಮದಲ್ಲಿಯೂ ಗಾಂಧಿ ಮತ್ತು ಸರಳಾದೇವಿ ಅನ್ಯೋನ್ಯವಾಗಿದ್ದಾರೆ ಎಂಬ ಸುದ್ದಿ ಬಂತೋ, ಅಂದೇ ರಾಜಾಜಿ ಖಾರವಾದ ಪತ್ರವೊಂದನ್ನು ಗಾಂಧೀಜಿಗೆ ಬರೆದರು. ಅದರ ಸಾರ ಹೀಗಿದೆ:
'ನನ್ನ ಪ್ರೀತಿಯ ಬಾಪೂ' ನಿಮ್ಮ ಈಗಿನ ಸ್ಥತಿ ನೀಡಿ ನಗಬೇಕೋ ಅಳಬೇಕೋ ತಿಳಿನುತ್ತಿಲ್ಲ. ಸರಳಾದೇವಿ ಒಂದು ಮಾಯೆ ಎಂಬುದು ನಿಮಗೇಕೆ ಅರ್ಥವಾಗುತ್ತಿಲ್ಲ. ನಿಮ್ಮಿಬ್ಬರ ಪ್ರೇಮದ ಕಥೆ ಕೇಳಿ ನಿಮ್ಮ ಮಕ್ಕಳು ಹೇಗೆ ಪ್ರತಿಕ್ರಿಯಿಸಬಹುದು, ಯೋಚಿಸಿಧ್ದೀರಾ? ಇಡೀ ದೇಶ ನಿಮ್ಮೆಡೆಗೆ ಅಭಿಮಾನದಿಂದ ನೋಡುತ್ತಿದೆ. ಆದರೆ, ಅದೇ ಕ್ಷಣದಲ್ಲಿ ನೀವು ಹೆಣ್ಣೊಬ್ಬಳೆಡೆಗೆ ಆಸೆಯಿಂದ ನೋಡುತ್ತ ನಿಂತು ಬಿಟ್ಟಿದ್ದೀರಿ! ಇದು ನಾಚಿಕೆಯ ವಿಷಯವಲ್ಲವೆ? ನೀವಾದರೋ-ಪ್ರಖರ ಸೂರ್ಯ. ಆಕೆ ಎಣ್ಣೆ ಇದ್ದಷ್ಟು ಹೊತ್ತು ಮಾತ್ರ ಉರಿದ ದೀಪ. ಈ ಮಾತು ಅರ್ಥ ಮಾಡಿಕೊಳ್ಳಿ. ಆ ಮೋಹದ ಬಲೆಯಿಂದ ಬೇಗ ಹೊರಬನ್ನಿ.
ಈ ಪತ್ರ ನಿಜಕ್ಕೂ ಗಾಂಧೀಜಿಯ ಮೇಲೆ ಪ್ರಭಾವ ಬೀರಿತು. ಅದುವರೆಗೂ ಸರಳಾದೇವಿಯ ಮೋಹದಲ್ಲಿ ಎಲ್ಲವನ್ನೂ, ಎಲ್ಲರನ್ನೂ ಮರೆತಿದ್ದ ಗಾಂಧೀಜಿ ತಕ್ಷಣವೇ ಎಚ್ಚರಾದರು.ಈ ಅಫೇರ್ ನಿಂದಾಗಿ ತಮ್ಮ ಇಮೇಜ್ ಹಾಳಾಗುತ್ತೆ ಎಂದು ಹೆದುರಿದರೋ ಬೆಳೆದ ಮಕ್ಕಳ ಮುಂದೆ ನಾನು ಸಣ್ಣವ ಆಗಬಾರದೆಂದು ಯೋಚಿಸಿದರೋ ಅಥವಾ ದೇಶದ ಜನರೆಲ್ಲ ನನ್ನನ್ನು ಅಪಹಾಸ್ಯ ಮಾಡುವರೆಂದು ಲೆಕ್ಕ ಹಾಕಿದರೋ....ಭಗವಂತ ಬಲ್ಲ. ಆದರೆ ರಾಜಾಜಿಯ ಪತ್ರ ಓದಿದ ತಕ್ಷಣವೇ-'ಪ್ರೀತಿಯ ರಾಜಾಜಿ, ನಿಮ್ಮ ಎಚ್ಚರದ ಮಾತು, ನನ್ನ ಹೆಂಡತಿ,ಮಕ್ಕಳ ಒಲುಮೆ ದೊಡ್ಡ ಗಂಡಾಂತರದಿಂದ ನನ್ನನ್ನು ಕಾಪಾಡಿತು. ನಮ್ಮ ಸಂಬಂಧವನ್ನು ಇಂದೇ ಮುರಿದುಕೊಳ್ಳುತ್ತಿದ್ದೇನೆ' ಎಂದು ಟೆಲಿಗ್ರಾಂ ಕೊಟ್ಟರು. ಅಷ್ಟೇ ಅಲ್ಲ. ಅಂದೇ ಕೂತು ಸರಳಾದೇವಿಗೂ ಒಂದು ಸುದೀರ್ಘ ಪತ್ರ ಬರೆದರು. ಆ ಪತ್ರದ ಪೂರ್ಣ ಪಾಠ ಹೀಗಿದೆ:
'ಪರಿಚಯವಾದ ದಿನದಿಂದಲೂ ನನ್ನ ಪ್ರೇಮವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದೇನೆ. ನಾವಿಬ್ಬರೂ ಭಾವನಾತ್ಮಕವಾಗಿ, ಮಾನಸಿಕವಾಗಿ ಒಂದಾಗಿದ್ದೇವೆ ಎಂದು ಹೇಳಿದ್ದೇನೆ ಇವತ್ತು ಯೋಚಿಸಿದರೆ-ದೈಹಿಕ ಕಾಂಕ್ಷೆಗಳೇ ಇಲ್ಲದ ಗಂಡು-ಹೆಣ್ಣಿನ ಮಧ್ಯೆ ಮಾತ್ರ ಅಂಥ ಸಂಬಂಧ ಸಾಧ್ಯ ಅನಿಸುತ್ತಿದೆ.ಅಂಥದೊಂದು ಸಂಬಂಧ ಅಣ್ಣ-ತಂಗಿ, ತಂದೆ-ಮಗಳ ಮಧ್ಯೆ ಮಾತ್ರ ಉಳಿದಿರಲು ಸಾದ್ಯ. ಹಾಗೆಯೇ ಬ್ರಹ್ಮಚರ್ಯಪಾಲಿಸುವ ಗಂಡು-ಹೆಣ್ಣಿನ ಮಧ್ಯೆಯೂ ಅಂಥದೊಂದು ಸಂಬಂಧ ಉಳಿಯಲು ಸಾಧ್ಯ. ಅಂಥದೊಂದು ಸಂಬಂಧವನ್ನು ನಿನ್ನೊಂದಿಗೆ ಹೊಂದಿರಬೇಕೆಂಬ ಅಭಿಲಾಷೆ ನನ್ನದು. ಆದರೆ ಅದಕ್ಕೆ ನನ್ನ ಎಲ್ಲ ಕೆಲಸಗಳಿಗೆ, ಹೋರಾಟಗಳಿಗೆ, ಚಿಂತನೆಗಳಿಗೆ ನೀನು ಸ್ಫೂರ್ತಿಯಾಗಿದ್ದೆ. ನನ್ನ ಪರಮಾಪ್ತೆಯಾಗಿದ್ದೆ.ಆದರೆ ಅಂಥದೊಂದು ಬಾಂಧವ್ಯ ಮುಂದೆ ಸಾದ್ಯವಿಲ್ಲ....ಇದು ನಿನಗೆ ನನ್ನ ಕಡೆಯ ಮತ್ತು ಸುದೀರ್ಘ ಪತ್ರ!'
ಹೀಗೆ ಬರೆದ ಗಾಂಧೀಜಿ ಕಡೆಗೆ 'your' L.G' ಎಂದು ಪತ್ರ ಮುಗಿಸುತ್ತಾರೆ. ಇಲ್ಲಿL. G.ಅಂದರೆ Law Giver (ನ್ಯಾಯ ಹೇಳುವವನು ಅಥವಾ ತೀರ್ಪುಗಾರ ಎಂದರ್ಥ!)
ಈ ಪತ್ರ ಓದಿದಾಗ ಸರಳಾದೇವಿ ಪ್ರತಿಕ್ರಿಯಿಸಿದರು ಅಂದರೆ-ಆಕೆ ಕ್ಷಣ ಕಂಪಿಸಿದರಂತೆ. ಆ ಪತ್ರವನ್ನೇ ಮತ್ತೆ ಮತ್ತೆ ಓದಿದರಂತೆ.ಭೋರಿಟ್ಟು ಅತ್ತರಂತೆ.ಇಷ್ಟು ದಿನಗಳ ಮಾತು,ಭಾಷೆ,ಭರವಸೆ, ಇಬ್ಬರ ಮದ್ಯೆ ಪುಟಿದೆದ್ದ ಆಸೆ...ಈ ಯಾವುದಕ್ಕೂ ಅರ್ಥವೇ ಇಲ್ವಾ ಎಂದು ಬಿಕ್ಕಳಿಸುತ್ತಾ ಕೇಳಿದರಂತೆ.
ಎಲ್ಲ ಸರಿ, ಈ ಅಫೇರ್ ನ ವಿಷಯ ತಿಳಿದ ನಂತರ ಕೂಡ ಸರಳಾದೇವಿಯ ಪತಿರಾಯ ರೇಗಲಿಲ್ವಾ? ಆ ದಂಪತಿಯ ಮದ್ಯೆ ಜಗಳ ಆಗಲಿಲ್ವಾ ಸರಳಾದೇವಿಯ ಮಗ ಗಾಂಧೀಜಿಗೆ ಅವಾಜ್ ಹಾಕಲಿಲ್ವಾ....ಇಂಥ ಯಾವ ಪ್ರಶ್ನೆಗೂ ಉತ್ತರ ಸಿಗುವುದಿಲ್ಲ. ಬದಲಿಗೆ,1901ರಲ್ಲಿ ಶುರುವಾದ ಗಾಂಧೀಜಿಯ ಪ್ರೇಮ ಪ್ರಕರಣ 1920ರಲ್ಲಿ ಕೊನೆಗೊಂಡಿತು.ನಂತರದ ದಿನಗಳಲ್ಲಿ ಗಾಂಧೀಜಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಬ್ಯುಸಿಯಾದರು.ಸರಳಾದೇವಿ 1945ರಲ್ಲಿ ತೀರಿಕೊಂಡರು. ಎಂದಷ್ಟೇ ವಿವರಣೆ ದಕ್ಕುತ್ತದೆ.


 

ಚಿತ್ರರಂಗ ಪ್ರಳಯ...

ಚಿತ್ರರಂಗ ಪ್ರಳಯ...

ಪ್ರಳಯಕ್ಕೂ ಸಿನಿಮಾಕ್ಕೂ ನಂಟಿದೆ. ಪ್ರಳಯವೆಂಬ್‌ ಠುಸ್‌ ಪಟಾಕಿಗೆ ಶತಮಾನಗಳ ಇತಿಹಾಸ ಇದೆ. ಇದನ್ನೇ ಬಂಡವಾಳವಾಗಿಸಿಕೊಂಡ ಹಾಲಿವುಡ್‌ ಸಿನಿಮಾ ನಿರ್ಮಾಪಕರು ಕೋಟ್ಯಂತರ ರೂ. ಲಾಭ ಮಾಡಿದ್ದಾರೆ. ಈಗ್ಗೆ ಸುಮಾರು 180 ಚಿತ್ರಗಳು, ಪ್ರಳಯ, ಭೂಕಂಪ, ಸುನಾಮಿಯಂಥವುಗಳನ್ನು ಆಧರಿಸಿದ್ದಾಗಿದೆ. 2009ರಲ್ಲಿ ತೆರೆ ಕಂಡ '2012' ಚಿತ್ರಕ್ಕೆ ಹೂಡಿಕೆಯಾಗಿದ್ದು 1 ಸಾವಿರ ಕೋಟಿಯಂತೆ. ಬಂದ ಲಾಭ 4 ಸಾವಿರ ಕೋಟಿ. 2012ರ ನಂತರ ಆಗುವ ಪ್ರಳಯ ಹೇಗಿರಬಹುದು, ಮನುಷ್ಯನ ದೀನ ಸ್ಥಿತಿ ಹೇಗಿರುತ್ತದೆ ಎನ್ನುವುದೇ ಈ ಚಿತ್ರದ ವಸ್ತು ವಿಷಯ. 20ನೇ ಶತಮಾನದ ಅಂಚಿನಲ್ಲಿ ಸುನಾಮಿ, ಡೈನೋಸಾರಸ್‌, ನೈಸರ್ಗಿಕ ವಿಕೋಪಗಳನ್ನು ಬಳಸಿಕೊಂಡು ಚಿತ್ರಗಳನ್ನು ಮಾಡಿ ಹಣ ಮಾಡಿದ್ದಾರೆ. ಈ ಸಾರಿ ಪ್ರಳಯವನ್ನೇ ಆಧರಿಸಿದ ಹಲವು ಚಿತ್ರಗಳು ಈಗ ದುಡ್ಡು ಮಾಡಿವೆ. ಜನರಲ್ಲಿ ಭಯದ ಕಲ್ಪನೆ ಮೂಡಿಸುವಲ್ಲಿ ಸಿನಿಮಾಗಳ ಪಾತ್ರವೂ ದೊಡ್ಡದು.

ಪ್ರಳಯದ ಬಗ್ಗೆ ನಾಸಾ ಹೀಗನ್ನುತ್ತೆ ..

ಪ್ರಳಯದ ಬಗ್ಗೆ ನಾಸಾ ಹೀಗನ್ನುತ್ತೆ ..

ನಿಬಿರು ಎಂಬ ಗ್ರಹ ಇದೆ. ಇದು ಭೂಮಿಗೆ ಅಪ್ಪಳಿಸಿದರೆ ಮುಗೀತು. ಎಲ್ಲ ಗ್ರಹಗಳು ಸರಳ ರೇಖೆಯಲ್ಲಿ ಬಂದು ಸಂಧಿಸುತ್ತದೆ. ಇಂಥ ಸಮಯದಲ್ಲಿ ಭೂಮಿ ಛಿದ್ರ ಛಿದ್ರ. ಮಾಯಾನ್‌ ಕ್ಯಾಲೆಂಡರ್‌ ಅಂತ ಒಂದಿದೆ. ಅದು 21, ಡಿಸೆಂಬರ್‌, 2012ಕ್ಕೆ ಕೊನೆಗೊಂಡಿದೆ. ಅಂದರೆ ಭೂಮಿ ಆಯಸ್ಸು ಡಿಸೆಂಬರ್‌ 21ರ ತನಕ ಮಾತ್ರ.
-ಇದು ಈಗ ಹಚ್ಚಿರುವ ಪ್ರಳಯದ ಬೆಂಕಿ. ನಾಸಾ ಪ್ರಕಾರ ಗ್ರಹಗಳ ಅಪ್ಪಳಿಸುವಿಕೆ ಒಂದೇ ದಿನಕ್ಕೆ, ಒಂದೇ ವರ್ಷಕ್ಕೆ ಆಗುವಂಥದ್ದಲ್ಲ. ಹಲವು ದಶಕಗಳ ಮೊದಲೇ ಸೂಚನೆ ದೊರೆಯುತ್ತದೆ. ನಿಬಿರು ಗ್ರಹ ಅಪ್ಪಳಿಸುತ್ತದೆ ಎಂದರೆ ಈಗಾಗಲೇ ನಮ್ಮ ಉಪಗ್ರಹಗಳಿಗೆ ಸೂಚನೆ ಸಿಗಬೇಕಿತ್ತು. ಆ ರೀತಿಯಾವುದೇ ಪ್ರಕ್ರಿಯೆ ಆಗಿಲ್ಲ. ಆಮೇಲೆ ಪ್ಲಾನೆಟ್‌ ಅಲೈನ್‌ಮೆಂಟ್‌ ಆಗಾಗ ಆಗುತ್ತಿರುತ್ತದೆ. ಮಾನವನ ಬದುಕಿನ ಚಕ್ರ ಇದ್ದಂತೆ. ಸೌರಚಕ್ರಕ್ಕೆ ಇದು ಸಾಮಾನ್ಯ ಪ್ರಕ್ರಿಯೆ. ಇದನ್ನು ಪ್ರಳಯಕ್ಕೆ ಹೋಲಿಸಿ ಬೆಚ್ಚಿ ಬೀಳುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾವುದೇ ಕಾರಣಕ್ಕೂ ಪ್ರಳಯ ಆಗೋದಿಲ್ಲ. ಬಿ ಹ್ಯಾಪಿ ಅನ್ನತ್ತದೆ ನಾಸಾ.

ಇವಳೇ ಪ್ರಳಯಕ್ಕೆ ಕಾರಣ

ಇವಳೇ ಪ್ರಳಯಕ್ಕೆ ಕಾರಣ

ಡಿಸೆಂಬರ್‌ 21 -2012 ಪ್ರಳಯ. ಹಾಗಂತ ಇಡೀ ಜಗತ್ತಿಗೆ ಪ್ರಳಯದ ಕಾವು ಕೊಟ್ಟಿದ್ದು ಪ್ರಳಯಾಂತಕಿ ನ್ಯಾನ್ಸಿ ಲೇಡರ್‌ ಅನ್ನೋ ಹೆಂಗಸು. ನಾಸಾದವರು ಈಕೆಗೆ ಹುಚ್ಚಿ ಎನ್ನುವ ಪಟ್ಟವನ್ನೇ ಕೊಟ್ಟಿದ್ದಾರೆ. ಈಕೆ ತನ್ನ ಝಾಟ ಟಾಕ್‌ ಅನ್ನೋ ವೆಬ್‌ಸೈಟಲ್ಲಿ ಜಗತ್ತು ಸಾಯುತ್ತದೆ ಅಂತ ಘೋಷಿಸಿಬಿಟ್ಟಳು. 1995ರ ಜನವರಿಯಲ್ಲಿ ಮೊದಲಬಾರಿಗೆ ಈಕೆ ಪ್ರಳಯದ ಮಾತನಾಡಿದಳು. ಆಗಲಿಲ್ಲ. 2003ರಲ್ಲಿ ಪ್ರಳಯ ಅಂದಳು, 2012 ಡಿಸೆಂಬರ್‌ 21ರಂದು ಗ್ಯಾರಂಟಿ ಎಂದಳು. ಈವರೆಗೆ ಪ್ರಳಯದ ಯಾವ ಮುನ್ಸೂಚನೆಯೂ ಸಿಕ್ಕಿಲ್ಲ. ಆದರೆ ಈಕೆ ಪ್ರಳಯದ ಜಪವನ್ನು 9 ವರ್ಷಗಳಿಂದ ಮಾಡುತ್ತಿದ್ದಾಳೆ. ನಂಬುವವರು ಇರುವ ತನಕ ನ್ಯಾನ್ಸಿ ಹೀಗೆ ಆಡುತ್ತಲೇ ಇರುತ್ತಾಳೆ.

ಪ್ರಳಯ ಭಯ ಅನಾದಿ

 ಪ್ರಳಯ ಭಯ ಅನಾದಿ

ಪ್ರಳಯ, ಪ್ರಳಯ, ಪ್ರಳಯ ಅಂಥ ಬೊಬ್ಬೆ ಹೊಡೆಯುವುದ್ದಕ್ಕೂ ಇತಿಹಾಸ ಇದೆ. ಕ್ರಿಶ. 40ನೇ ಇಸ್ವಿಯಲ್ಲಿ ಪ್ರಳಯ ಆಗುತ್ತೆ ಅಂತ ಹೇಳಿಬಿಟ್ಟಿದ್ದರು. ಆಗಲೂ ಇಡೀ ಜಗತ್ತನ್ನು ಹರಡಿ ಕೊನೆಗೆ ಕಿಮ್ಮತ್ತೂ ಸಿಗಲಿಲ್ಲ ಆ ಸುದ್ದಿಗೆ. 40ರಿಂದ ಇಲ್ಲಿತನಕ ಲೆಕ್ಕ ಹಿಡಿದರೆ ಸುಮಾರು 240ಕ್ಕೂ ಹೆಚ್ಚು ಬಾರಿ ಪ್ರಳಯದ ಭೀತಿ ಹುಟ್ಟಿಸಿದ್ದಾರೆ.
ಫೆಬ್ರವರಿ 1.1524 ಲಂಡನ್‌ನಲ್ಲಿ ಥೇಮ್ಸ್‌ ನದಿ ಪ್ರವಾಹ ಆಗುತ್ತದೆ ಎಂಬ ಪುಕಾರಾಯಿತು. ಥೇಮ್ಸ್‌ ನದಿ ಜೊತೆಗೆ ಇದು ಜಗತ್ತಿನ ಸಾವಿನ ಮುನ್ಸೂಚನೆ ಎನ್ನುವ ದೊಡ್ಡ ಟೊಳ್ಳು ಅಲೆ ಎದ್ದಿತು. ಆದರೆ ಏನೂ ಆಗಲಿಲ್ಲ. ಇದೇ ರೀತಿ ಡಿ. 15, 1814 ಜೋನಾ ಸೌತ್ಕಾಟ್‌ ಎಂಬ ಅಮೆರಿಕದ ಮಹಿಳೆ ಏಸು ಕ್ರಿಸ್ತ ನನ್ನ ಹೊಟ್ಟೆಯಲ್ಲಿ ಹುಟ್ಟುತ್ತಾನೆ. ನನ್ನ ಸಾವಿನ ಬಳಿಕೆ ಇಡೀ ವಿಶ್ವವೇ ನಾಶವಾಗುತ್ತದೆ ಎಂದು ಹೇಳಿಕೊಂಡು ಪ್ರಳಯದ ಭೀತಿಯನ್ನು ಪಸರಿಸಿದಳು.
ಡಿಸೆಂಬರ್‌ 17-1919ರಲ್ಲಿ ಆಲ್ಬರ್ಟ್‌ ಎನ್ನುವವ ಭೂಮಿಗೆ ಮತ್ತೆರಡು ಗ್ರಹಗಳು ಅಪ್ಪಳಿಸುತ್ತವೆ. ಇದರ ಜಗಳದಿಂದ ಇಡೀ ಭೂಮಿಯೇ ಸರ್ವನಾಶವಾಗುತ್ತದೆ ಅಂತಲೂ ಹೇಳಿದ್ದ. ಈತನ ಮಾತಿನ ಪರಿಣಾಮ ಬರೀ ಶೂನ್ಯ. 1979ರಲ್ಲಿ ಇಟಲಿಯಲ್ಲಿ ಜ್ವಾಲಾಮುಖೀ ಹೆಚ್ಚಾಗಿ ಲಾವಾರಸ ಹೊರ ಬಂದಾಗ ರೋಮ್‌ ಶಾಸ್ತ್ರಜ್ಞರು ಲೆಕ್ಕ ಹಾಕಿ ಭೂ ಮಂಡಲಕ್ಕೆ ಕೊನೆ ಅಂಥ ಷರಾ ಬರೆದರು. ಆದರೆ ಭೂಮಿ ಇನ್ನೂ ಬದುಕಿದೆ.
ಏಪ್ರಿಲ್‌ 20-1980ರಲ್ಲಿ ಲೆಲಾಂಡ್‌ ಎಂಬುವವ ಅಣುಬಾಂಬ್‌ನಿಂದ ಪ್ರಪಂಚಾ ನಾಶ ಹೊಂದುತ್ತದೆ. ಇದಕ್ಕೆ ಕಾರಣ ಅಣುಬಾಂಬ್‌ ಹೊಂದಿರುವ ಸೂಪರ್‌ ಪವರ್‌ ದೇಶಗಳು. ಏಪ್ರಿಲ್‌ 21ಕ್ಕೆ ಇಡೀ ಪ್ರಪಂಚವೇ ನಾಶವಾಗುತ್ತದೆ. 90ರ ದಶಕದಲ್ಲಿ ಎರಡು ಬಾರಿ ಪ್ರಳಯದ ಪುಕಾರುಗಳು ಹಬ್ಬಿಕೊಂಡಿದ್ದವು. 1996ರಲ್ಲಿ ಸದ್ಯದಲ್ಲಿ ಪ್ರಳಯ ಸನ್ನಿಹಿತ ಎಂದಾಗಿ ಸಾರ್ವತ್ರಿಕವಾಗಿ ಸುದ್ದಿಯಾಯಿತು. ಈಗಿನಂತೆಯೇ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಯೇ ಆಗಿತ್ತು. ಪ್ರಳಯದ ಹೆಸರಿನಲ್ಲಿ ಪುಸ್ತಕಗಳೇ ಅಚ್ಚಾದವು. ಆದರೆ ಪುಸ್ತಕಗಳು ಬಿಕರಿಯಾದವೇ ಹೊರತು ಪ್ರಳಯ ಮಾತ್ರ ಆಗಲಿಲ್ಲ. 1999 ಮತ್ತು 2000ನೆಯ ಎರಡು ವರ್ಷ ಮತ್ತೂಮ್ಮೆ ಪ್ರಳಯದ ಪುಕಾರು ಹಬ್ಬಿತು.
ಮೇ 31, 1998ರಲ್ಲಿ ದೇವರು ಅಮೇರಿಕಾ ಚಾನಲ್‌ಗ‌ಳಲ್ಲಿ ಕಾಣಿಸಿ ಕೊಳ್ಳುವುದರ ಮೂಲಕ ಅಸ್ತಿತ್ವ ತೋರಿಸಲಿದ್ದಾನೆ. ಇದರ ನಂತರ ಆಗುವುದೇ ಪ್ರಪಂಚ ನಾಶ ಎಂದು ಸುದ್ದಿ ತಂದವರು ಹಾನ್ಸ್‌ ಮಿಚಿಗನ್‌. ಇಷ್ಟು ವರ್ಷ ಆದ ಮೇಲೂ ಜಗತ್ತು ಮತ್ತು ಜನ ಹಾಗೇ ಇದ್ದಾರೆ.

ಗುರುವಾರ, ಡಿಸೆಂಬರ್ 20, 2012

ಧನ್ಯವಾದಗಳು.....

 ಧನ್ಯವಾದಗಳು.....

ನನ್ನ ಎಲ್ಲ ಲೇಖನಗಳನ್ನು ಇದುವರೆಗೆ ಓದಿರುವ ನನ್ನ ಎಲ್ಲ ವಿದೇಶಿ ಕನ್ನಡ ಓದುಗರಿಗೆ  ಹಾಗೂ ನನ್ನ ಭಾರತ ದೇಶದ ಕನ್ನಡಿಗರಿಗೆ ನನ್ನ ಧನ್ಯವಾದಗಳು.....ನನ್ನ ಬರಹಗಳನ್ನು
೧)ಅಮೇರಿಕಾ ಸಂಯುಕ್ತ ಸಂಸ್ಥಾನ,
೨)ರಶಿಯಾ,
೩)ಜರ್ಮನಿ,
೪)ಫ್ರಾನ್ಸ್,
೫)ಇಂಡೋನೇಶಿಯಾ,
೬)ಸೌದಿ ಅರೇಬಿಯಾ,
ಓದುತ್ತಿದ್ದಾರೆ ಎಂದು ಹೇಳಲು ತುಂಬಾ ಸಂತೋಷವಾಗುತ್ತದೆ..ಆದರೆ ಯಾರು ಸಹ ನನ್ನ ಲೇಖನಗಳಿಗೆ ಕಮೆಂಟ್ಸ್ ಬರೆದಿಲ್ಲ...ಅದು ಯಾಕೆ ಎಂದು ಗೊತ್ತಿಲ್ಲ...ದಯಮಾಡಿ ಕಮೆಂಟ್ಸ್ ಬರೆಯಿರಿ...ಆಗಲೇ ನನ್ನ ಲೇಖನಗಳ ತಪ್ಪು ಒಪ್ಪುಗಳು ನನಗೆ ಅರ್ಥವಾಗುತ್ತದೆ.ಹೀಗೆ ನನ್ನ ಲೇಖನಗಳನ್ನು ಓದಿ ನನ್ನಗೆ ಸ್ಪೂರ್ತಿ ತುಂಬಬೇಕಾಗಿ..ನಿಮ್ಮಲ್ಲಿ ವಿನಂತಿ....ಧನ್ಯವಾದಗಳು.....
ಇಂತಿ ನಿಮ್ಮ
ನಾರಾಯಣಗೌಡ..

ಸೋಮವಾರ, ನವೆಂಬರ್ 12, 2012

ಹುಡುಗಿ ಮೆಚ್ಚಬೇಕೆಂದರೆ ಇರಲೇಬೇಕಾದ 6 ಗುಣಗಳು


ಹುಡುಗಿ ಮೆಚ್ಚಬೇಕೆಂದರೆ ಇರಲೇಬೇಕಾದ 6 ಗುಣಗಳು


ತುಂಬಾ ಆಕರ್ಷಕವಾಗಿರುವ ಪುರುಷರನ್ನು ಹೆಣ್ಮಕ್ಕಳು ಮದುವೆಯಾಗಬಯಸುತ್ತಾರೆ ಎಂದು ಪುರುಷರು ಅಂದುಕೊಂಡಿದ್ದರೆ ಅದು ತಪ್ಪು. ಹುಡುಗಿ ತನ್ನ ಬಾಳಸಂಗಾತಿಯಲ್ಲಿ ಅಂದಕ್ಕಿಂತ ಮಿಗಿಲಾಗಿ ಈ ಕೆಳಗಿನ ಅಂಶಗಳಿಗೆ ಹೆಚ್ಚು ಮಹತ್ವ ಕೊಡುತ್ತಾಳೆ. ತುಂಬಾ ಆಕರ್ಷವಾಗಿದ್ದು ಈ ಕೆಳಗಿನ ಗುಣಗಳು ಇಲ್ಲದಿದ್ದರೆ ಅಂತಹ ಹುಡುಗರಿಗೆ ಹುಡುಗಿಯರು ಆಕರ್ಷಿತರಾಗುವುದಿಲ್ಲ.
1. ವ್ಯಕ್ತಿತ್ವ: ಅಂದವಾಗಿರುವ ಪುರುಷನಿಗಿಂತ ಉತ್ತಮ ವ್ಯಕ್ತಿತ್ವ ಹೊಂದಿರುವ ಪುರುಷನನ್ನು ಬಾಳ ಸಂಗಾತಿಯಾಗಿ ಪಡೆಯಲು ಬಯಸುತ್ತಾಳೆ. ತುಂಬಾ ಆಕರ್ಷಕವಾಗಿದ್ದು ಅವನ ಬುದ್ಧಿ ಸರಿಯಿಲ್ಲ ಅಂದರೆ ಅಂತಹವನ ಜೊತೆ ಬಾಳ್ವೆ ಮಾಡಲು ಯಾವ ಹೆಣ್ಣು ಬಯಸುವುದಿಲ್ಲ.
2. ನಡವಳಿಕೆ: ತುಂಬಾ ಸಿಡುಕಿನ ಸ್ವಭಾವ ಹೊಂದಿದ್ದರೆ, ಸಾರ್ವಜನಿಕ ಸ್ಥಳಗಳಲ್ಲಿ ಜೋರಾಗಿ ಮಾತನಾಡುವುದು, ಹಿರಿಯರಿಗೆ ಗೌರವ ಕೊಡದಿರುವುದು, ಬಾಯಿಗೆ ಬಂದ ಹಾಗೆ ಮಾತನಾಡುವುದು ಈ ರೀತಿಯ ಗುಣಗಳನ್ನು ಹೊಂದಿದ್ದರೆ ಅಂತಹ ಹುಡುಗರು ಹುಡುಗಿಯರಿಗೆ ಇಷ್ಟವಾಗುವುದಿಲ್ಲ.

3. ಪ್ರೀತಿ ಮತ್ತು ಕಾಳಜಿ:
ಈ ಗುಣವನ್ನು ಹೊಂದಿರುವ ಪುರುಷ ಹುಡುಗಿಯರಿಗೆ ಬೇಗನೆ ಇಷ್ಟವಾಗುತ್ತಾನೆ. ಮನೆಯವರ ಬಗ್ಗೆ ಕಾಳಜಿ ಮತ್ತು ಪ್ರೀತಿ ಹೊಂದಿದ್ದರೆ ತನ್ನನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ಭರವಸೆ ಹೊಂದುತ್ತಾಳೆ.

4. ಬುದ್ಧಿವಂತಿಕೆ:
ಬುದ್ಧಿವಂತ ಪುರುಷರು ಸುಲಭದಲ್ಲಿಯೆ ಹುಡುಗಿಯರ ಮನ ಗೆಲ್ಲುತ್ತಾರೆ. ಬುದ್ಧಿವಂತ ಹುಡುಗನಾಗಿದ್ದರೆ ಹುಡುಗಿಯರು ಅವನ ಅಂದದ ಬಗ್ಗೆ ಹೆಚ್ಚು ಗಮನ ಕೊಡದೆ ಅವನ ಬುದ್ಧಿವಂತಿಕೆಗೆ ಮಾನ್ಯತೆ ಕೊಡುತ್ತಾರೆ. ತುಂಬಾ ಚೆಂದ ಇದ್ದು ದಡ್ಡನಾಗಿದ್ದರೆ ಅಂತಹ ಹುಡುಗರು ಹುಡುಗಿಯರಿಗೆ ಇಷ್ಟವಾಗುವುದಿಲ್ಲ.
5. ಹಣ ಮತ್ತು ಉದ್ಯೋಗ: ಉತ್ತಮವಾದ ಉದ್ಯೋಗ, ಕೈ ತುಂಬಾ ಸಂಬಳವಿದ್ದರೆ ಹುಡುಗ ನೋಡಲು ಚೆನ್ನಾಗಿ ಇಲ್ಲದಿದ್ದರೂ ರೂಪವಂತಿಯಾದ ಹುಡುಗಿ ಅವನ ಬಾಳ ಸಂಗಾತಿಯಾಗಿ ಬರಲು ಸಿದ್ಧವಿರುತ್ತಾಳೆ. ಇಲ್ಲಿ ಹೆಣ್ಣು ಚೆಂದಕ್ಕೆ ಬದಲಾಗಿ ತನ್ನ ಸುರಕ್ಷತೆಯನ್ನು ನೋಡುತ್ತಾಳೆ.
6. ಒಡನಾಟ: ಗಂಡನಾದವನು ಉತ್ತಮವಾದ ಒಡನಾಟವನ್ನು ಹೊಂದಿರಬೇಕು. ಒಬ್ಬ ಗೆಳೆಯನಂತೆ ಆತ್ಮೀಯತೆಯಿಂದ ವರ್ತಿಸಬೇಕು ಅಂತ ಹೆಣ್ಣು ಬಯಸುತ್ತಾಳೆ. ಈ ಗುಣವಿರುವ ಪುರುಷರನ್ನು ಹೆಣ್ಣು ತುಂಬಾ ಇಷ್ಟಪಡುತ್ತಾಳೆ.

ನಿಮ್ಮ ಅಭಿಪ್ರಾಯ ತಿಳಿಸಿ..

ಸೋಮವಾರ, ನವೆಂಬರ್ 5, 2012

ಕನ್ನಡ ಪರ ಹೋರಾಟ ಸಂಘಗಳು ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಲ್ಲಿ ?

ಕನ್ನಡ ಪರ ಹೋರಾಟ ಸಂಘಗಳು

ನಮ್ಮ ಇಂದಿನ ಕನ್ನಡ ಪರ ಹೋರಾಟ ಸಂಘಗಳು ಕೇವಲ ಕನ್ನಡ ರಾಜ್ಯೋತ್ಸವದ ದಿನದಂದು ಮಾತ್ರ ಕನ್ನಡ ಬಾವುಟವನ್ನು ಹಿಡಿದು ಕನ್ನಡಮ್ಮನಿಗೆ ಜೈಕಾರವನ್ನು ಕೂಗುತ್ತಾರೆ.ಆದರೆ ಬೇರೆ ದಿನಗಳಲ್ಲಿ ಕನ್ನಡದ ನೆನಪೇ ಇವರಿಗೆ ಇರುವುದಿಲ್ಲ..ಕೇವಲ ಹಣ ಮಾಡುವುದಕ್ಕೆ ಮಾತ್ರ ಈ ಸಂಘಗಳು ಕಾರ್ಯನಿರ್ವಹಿಸುತ್ತಾರೆ.ಅನ್ನೋವಷ್ಟ್ರ ಮಟ್ಟಿಗೆ ಇವು ನಮ್ಮ ರಾಜ್ಯದಲ್ಲಿ ಹೋರಾಟನಡಿಸುತ್ತವೆ..ಇವರ ಮಟ್ಟಿಗೆ ಕನ್ನಡಪರ ಹೋರಾಟದ ಸಂಘಗಳು ಒಂದು ಕಂಪನಿಯ ರೀತಿಯಲ್ಲಿ ಅದರ ರಾಜ್ಯಾದ್ಯಕ್ಷ ಕಂಪನಿಯ ಎಂ.ಡಿ.ಯ ರೀತಿ ನಡಿದುಕೊಳ್ಳುತ್ತಾರೆ.ಇವರು ನಿಜವಾದ ಕನ್ನಡ ಪ್ರೇಮಿಗಳೇ ಆಗಿದ್ದರೆ ನನ್ನ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲಿ...
೧)ಹೋರಾಟ ನಡಿಸುವ ಸಮಯದಲ್ಲಿ ನೀವು ಸುಮ್ನೇ ಶಾಂತ ರೀತಿಯಲ್ಲಿ ಇರುತಿರಿ ಆದರೆ ಮದ್ಯಮಗಳು ಬಂದ ಕೂಡಲೇ ಯಾಕೆ ನಿಮಗೆ ಕನ್ನಡ ಪ್ರೇಮ ಹೆಚ್ಚಾಗುವುದು ಅಂದರೆ ನಿಮ್ಮ ಕನ್ನಡ ಪ್ರೇಮ ನಾಟಕನ ಹ ?
೨) ಮದ್ಯಮದವರು ನಿಮ್ಮ ಸಂದರ್ಶನ ಮುಗಿಸಿದ ಮೇಲೆ ನೀವು ಯಾಕೆ ನಿಮ್ಮ ಹೋರಾಟವನ್ನು ಮುಂದುವರಿಸುವುದಿಲ್ಲ..ಏನು ನಡೆದೇ ಇಲ್ಲ ಎನ್ನುವ ರೀತಿಯಲ್ಲಿ ಹೊರಟ್ಟು ಹೋಗುತ್ತಿರ ಏಕೆ ನಿಮ್ಮ ಕನ್ನಡ ಪ್ರೇಮ ಮದ್ಯಮದವರಿಗೆ ಸಂದರ್ಶನ ನೀಡುವವರೆಗೆ ಮಾತ್ರನ?
೩)ನಿಮ್ಮ ಹೋರಾಟಗಳು ಕೇವಲ ಒಂದು ದಿನದ ಹೋರಾಟಯಾಕೆ ಸರಿಯಾದ ನ್ಯಾಯಸಿಗುವವರೆಗೆ ಯಾಕೆ ನೀವು ನಿಮ್ಮ ಹೋರಾಟವನ್ನು ಮುಂದುವರೆಸುವುದಿಲ್ಲ..ಯಾಕೆ ಮದ್ಯದಲ್ಲೇ ಹೋರಾಟವನ್ನು ನಿಲ್ಲಿಸಿ ಬಿಡುತ್ತಿರ..?
೪)ನಮ್ಮ  ರಾಜ್ಯದಲ್ಲಿ ಒಟ್ಟು ಎಷ್ಟು ಕನ್ನಡ ಪರ ಹೋರಾಟ ಸಂಘಗಳು  ಇವೆ ?
೫)ಯಾಕೆ ನೀವು ಬೇರೆ ಬೇರೆ ಕನ್ನಡ ಪರ ಹೋರಾಟ ಸಂಘಗಳು ಮಾಡಿಕೊಂಡು ಹೋರಾಟ ನಡಿಸುತ್ತೀರ.ಒಂದೇ ಕನ್ನಡ ಪರ ಹೋರಾಟ ಸಂಘದ ಅಡಿಯಲ್ಲಿ ಯಾಕೆ ನೀವು ಹೋರಾಟ ನಡಿಸುವುದಿಲ್ಲ..
೬)ನಿಮಗೆ ನಿಮ್ಮ ಕನ್ನಡ ಪರ ಹೋರಾಟ ಸಂಘದ ಹೆಸರು ಅಥವಾ ನಿಮ್ಮ ವೈಯಕ್ತಿಕ ಪ್ರತಿಷ್ಠೆ ಮುಖ್ಯವಾಗಿ ಬಿಡುತ..ಕನ್ನಡ ಅಲ್ವ..ಹ ..?
೭)ನಿಮ್ಮ ನಿಮ್ಮ ಕನ್ನಡ ಪರ ಹೋರಾಟ ಸಂಘಗಳಲ್ಲಿ  ಜಗಳ ಯಾಕೆ ? ನೀವು ಕನ್ನಡಿಗರು ತಾನೇ ?
೮)ನಾವು ಯಾವ ಕನ್ನಡ ಪರ ಹೋರಾಟ ಸಂಘ ನಂಬಬೇಕು.?
ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ..
ನಿಮ್ಮ ನಾರಾಯಣಗೌಡ 

ಓದುಗರೇ ನೀವು ಸಹ ನಿಮ್ಮ ಅಬಿಪ್ರಾಯಗಳನ್ನೂ ಬರೆಯಿರಿ ..ಹಾಗು ನನ್ನ ಪ್ರಶ್ನೆ ಗಳಿಗೆ ನೀವು ಸಹ ಉತ್ತರಿಸಬಹುದು..

ಭಾನುವಾರ, ನವೆಂಬರ್ 4, 2012

ಮಲಾಲ ಡೈರಿಯಿಂದ......


ಮಲಾಲ ಡೈರಿಯಿಂದ

ಪಾಕಿಸ್ತಾನಿ ತಾಲಿಬಾನಿಗಳಿಂದ ಗುಂಡೇಟು ತಿಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಈ ಹೋರಾಟಗಾರ್ತಿ ಮಾಡಿದ ತಪ್ಪಾದರೂ ಏನು? ಹೆಣ್ಣುಮಕ್ಕಳು ಶಾಲೆಗೆ ಹೋಗಬಾರದು ಎಂಬ ತಾಲಿಬಾನ್ ಆದೇಶವನ್ನು ವಿರೋಧಿಸಿದ್ದೇ ಅಪರಾಧ! ಎರಡು ವರುಷದ ಮುಂಚೆ ಬರೆದ ದಿನಚರಿಗಳನ್ನು ಗುಲ್ ಮಕಾಯಿ ಎಂಬ ಕಾವ್ಯನಾಮದಡಿಯಲ್ಲಿ ಬಿಬಿಸಿ ಉರ್ದುವಿನಲ್ಲಿ ಪ್ರಕಟಣೆಗೆ ನೀಡಿದ್ದು ಈಕೆಯ ಬಹುದೊಡ್ಡ ತಪ್ಪು. ಅಂದಹಾಗೆ ಮಲಾಲ ಯೂಸುಫ್ ಝಾಯಿ ಎಂಬ ಹೆಸರಿನ ಈ ಹೋರಾಟಗಾರ್ತಿಯ ವಯಸ್ಸು ಹದಿನಾಲ್ಕು.

ಶನಿವಾರ ಜನವರಿ 3: ಭಯವಾಗ್ತಿದೆ
ನಿನ್ನೆ ಕನಸಿನಲ್ಲಿ ಮಿಲಿಟರಿ ಹೆಲಿಕಾಪ್ಟರ ಗಳು ಮತ್ತು ತಾಲಿಬಾನಿಗಳು ಬಂದಿದ್ದರು. ನಮ್ಮ ಸ್ವಾಟ್ ಜಿಲ್ಲೆಯಲ್ಲಿ ಸೈನಿಕ ಕಾರ್ಯಾಚರಣೆ ಶುರುವಾದಾಗಿನಿಂದ ಈ ರೀತಿಯ ದುಸ್ವಪ್ನಗಳು ಮಾಮೂಲಾಗಿವೆ. ಅಮ್ಮ ಮಾಡಿಕೊಟ್ಟ ತಿಂಡಿ ತಿಂದು ಶಾಲೆಗೆ ಹೊರಟೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನಿಗಳು ನಿಷೇಧಿಸಿರುವುದರಿಂದ ನನಗೆ ಭಯವಾಗುತ್ತಿದೆ.

27 ಜನರಲ್ಲಿ 11 ಮಂದಿ ಮಾತ್ರ ಶಾಲೆಗೆ ಬಂದಿದ್ದೆವು. ತಾಲಿಬಾನ್ ಆದೇಶದಿಂದ ಹಾಜರಾತಿ ಕಡಿಮೆಯಾಗಿತ್ತು. ನನ್ನ ಮೂವರು ಗೆಳತಿಯರು ಈ ಆದೇಶದ ನಂತರ ತಮ್ಮ ಕುಟುಂಬದೊಡನೆ ಲಾಹೋರ, ಪೇಷಾವರ, ರಾವಲ್ಪಿಂಡಿಗೆ ಹೊರಟುಹೋಗಿದ್ದಾರೆ. 'ಸಾಯಿಸಿಬಿಡ್ತೀನಿ ನಿನ್ನ' ಶಾಲೆಯಿಂದ ಮರಳುವಾಗ ವ್ಯಕ್ತಿಯೊಬ್ಬನ ಧ್ವನಿ ಕೇಳಿ ಗಾಬರಿಯಾಗಿ ನಡೆಯುವ ವೇಗ ಹೆಚ್ಚಿಸಿದೆ. ಸ್ವಲ್ಪ ದೂರ ಕ್ರಮಿಸಿದ ಮೇಲೆ ಆ ವ್ಯಕ್ತಿ ಹಿಂಬಾಲಿಸುತ್ತಿದ್ದಾನಾ ಎಂಬ ಕುತೂಹಲದಿಂದ ತಿರುಗಿ ನೋಡಿದೆ. ನೆಮ್ಮದಿ ನೀಡಿದ ಸಂಗತಿಯೆಂದರೆ ಆತ ಫೋನಿನಲ್ಲಿ ಮಾತನಾಡುತ್ತಿದ್ದ, ಫೋನಿನಲ್ಲಿ ಯಾರಿಗೋ ಬೆದರಿಕೆ ಹಾಕುತ್ತಿರಬೇಕು.

ಭಾನುವಾರ ಜನವರಿ 4: ಎದೆಬಡಿತ ಹೆಚ್ಚುತ್ತದೆ.
ಶಾಲೆಗೆ ಹೋಗಬೇಕು,. ಇಂದು ಶಾಲೆಗೆ ರಜೆ; ಹಾಗಾಗಿ ತಡ ಮಾಡಿ ಎದ್ದೆ, ಹತ್ತು ಘಂಟೆಗೆ. ಗ್ರೀನ್‌ನ್ ಚೌಕದಲ್ಲಿ ಬಿದ್ದ ಮೂರು ಹೆಣಗಳ ಬಗ್ಗೆ ತಂದೆ ಮಾತನಾಡುತ್ತಿದ್ದುದನ್ನು ಕೇಳಿ ಬೇಸರವಾಯಿತು. ಈ ಸೈನಿಕ ಕಾರ್ಯಾಚರಣೆ ಆರಂಭಗೊಳ್ಳುವುದಕ್ಕೆ ಮುಂಚೆ ಪ್ರತಿ ಭಾನುವಾರ ಮರ್ಗಾಜರ, ಫಿಜಾ ಘಾಟ್ ಅಥವಾ ಕಡ್ಜುಗೆ ಪಿಕ್ನಿಕ್ಕಿಗೆ ಹೋಗುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದ್ಯಾವುದೂ ಸಾಧ್ಯವಿಲ್ಲ; ಪಿಕ್ನಿಕ್ಕಿಗೆ ತೆರಳಿ ಒಂದೂವರೆ ವರುಷದ ಮೇಲಾಯಿತು.

ರಾತ್ರಿ ಊಟದ ನಂತರ ಒಂದಷ್ಟು ತಿರುಗಾಡಿ ಬರುತ್ತಿದ್ದೆವು; ಈಗ? ಸೂರ್ಯ ಮುಳುಗುವುದಕ್ಕೆ ಮುಂಚಿತವಾಗಿಯೇ ಮನೆ ಸೇರಬೇಕು. ಒಂದಷ್ಟು ಮನೆಗೆಲಸ ಮಾಡಿ, ಹೋಮ್ ವರ್ಕ್ ಮುಗಿಸಿ ತಮ್ಮನ ಜತೆ ಆಟವಾಡಿದೆ. ನಾಳೆ ಪುನಃ ಶಾಲೆಗೆ ಹೋಗುವಾಗ ಏನಾಗಬಹುದು ಎಂಬುದನ್ನು ನೆನೆಸಿಕೊಂಡರೇ ಎದೆಬಡಿತ ಹೆಚ್ಚುತ್ತದೆ.

ಸೋಮವಾರ ಜನವರಿ 5: ಬಣ್ಣದ ಬಟ್ಟೆ ಧರಿಸಬಾರದು
ಬಣ್ಣದ ಬಟ್ಟೆಗಳನ್ನೂ ಧರಿಸಬಾರದು. ಶಾಲೆಗೆ ಹೊರಡಲು ತಯಾರಾಗುತ್ತ ಯೂನಿಫಾರ್ಮ್ ಕೈಗೆತ್ತಿಕೊಂಡಾಗ ಪ್ರಿನ್ಸಿಪಾಲ್ ಹೇಳಿದ್ದು ನೆನಪಾಯಿತು. ಯುನಿಫಾರಂ ಧರಿಸಿ ಬರಬೇಡಿ, ಸಾದಾ ಉಡುಪಿನಲ್ಲೇ ಶಾಲೆಗೆ ಬನ್ನಿ ಎಂದು ತಿಳಿಸಿದ್ದರು. ನನ್ನ ಮೆಚ್ಚುಗೆಯ ಪಿಂಕ್ ಬಣ್ಣದ ಬಟ್ಟೆಯನ್ನು ಧರಿಸಿ ಹೊರಟೆ. ಶಾಲೆಯ ಹುಡುಗಿಯರೆಲ್ಲ ಬಣ್ಣ ಬಣ್ಣದ ಬಟ್ಟೆ ಧರಿಸಿ ಬಂದಿದ್ದರು; ಮನೆಯ ವಾತಾವರಣವಿತ್ತು ಶಾಲೆಯಲ್ಲಿ. ಸತ್ಯ ಹೇಳು. ತಾಲಿಬಾನಿಗಳು ನಮ್ಮ ಶಾಲೆಯ ಮೇಲೆ ದಾಳಿ ಮಾಡುತ್ತಾರಾ? ಗೆಳತಿಯೊಬ್ಬಳು ಬಳಿ ಬಂದು ಕೇಳಿದಳು. ಬೆಳಗಿನ ಅಸೆಂಬ್ಲಿಯಲ್ಲಿ ಬಣ್ಣದ ಬಟ್ಟೆ ಧರಿಸಿ ಬರಬೇಡಿ, ತಾಲಿಬಾನ್ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಬಹುದು ಎಂದು ತಾಕೀತು ಮಾಡಿದರು.

ಶಾಲೆಯಿಂದ ಬಂದು ಊಟ ಮುಗಿಸಿ ಟ್ಯೂಷನ್ನಿಗೆ ಹೋಗಿ ಬಂದೆ. ಸಂಜೆ ಟಿವಿ ನೋಡುತ್ತಿದ್ದಾಗ ಶಕರ್ದದಲ್ಲಿ ಹದಿನೈದು ದಿನಗಳ ನಂತರ ಕರ್ಫ್ಯೂ ಹಿಂದೆಗೆದುಕೊಂಡ ಸುದ್ದಿ ಕೇಳಿ ಖುಷಿಯಾಯಿತು. ನಮ್ಮ ಇಂಗ್ಲಿಷ್ ಟೀಚರ್ ಶಕರ್ದದಲ್ಲಿ ವಾಸವಿದ್ದರು; ಬಹುಶಃ ಅವರು ನಾಳೆ ಶಾಲೆಗೆ ಬರುತ್ತಾರೆ.

ಬುಧವಾರ ಜನವರಿ 7: ಗುಂಡಿನ ಸದ್ದಿಲ್ಲ; ಭಯವೂ ಇಲ್ಲ
ಮೊಹರಂ ರಜೆಗೆ ಬುನೈರಿಗೆ ಬಂದಿದ್ದೇನೆ. ಎತ್ತರದ ಪರ್ವತ ಹಸಿರು ನೆಲದ ಹಾಸಿರುವ ಬುನೈರ್ ನನಗೆ ಪ್ರಿಯವಾದ ಜಾಗ. ನನ್ನ ಸ್ವಾತ್ ಕೂಡ ಸುಂದರವಾಗಿದೆ; ಆದರೆ ಶಾಂತತೆಯಿಲ್ಲ. ಬುನೈರಿನಲ್ಲಿ ಶಾಂತಿಯಿದೆ; ನೆಮ್ಮದಿಯಿದೆ; ಗುಂಡಿನ ಸದ್ದು ಕೇಳುವುದಿಲ್ಲ. ಭಯವೂ ಇಲ್ಲ. ನಾವೆಲ್ಲರೂ ಸಂತಸದಿಂದಿದ್ದೇವೆ. ಇಂದು ಪೀರ ಬಾಬಾ ಸಮಾಧಿಗೆ ಹೋಗಿದ್ದೆವು. ಜನರಿಂದ ಗಿಜಿಗುಡುತ್ತಿತ್ತು. ಅವರು ಪ್ರಾರ್ಥಿಸಲು ಬಂದಿದ್ದರೆ ನಾವು ರಜೆ ಕಳೆಯಲು ಬಂದಿದ್ದೆವು. ಆವರಣದಲ್ಲಿ ಬಳೆ, ಕಿವಿಯೋಲೆ, ನಕಲಿ ಗಿಲೀಟು ಒಡವೆಯ ಅಂಗಡಿಗಳಿದ್ದವು. ಏನನ್ನಾದರೂ ಖರೀದಿಸಬೇಕು ಎಂದುಕೊಂಡೆನಾದರೂ ಯಾವುದೂ ಅಷ್ಟು ಇಷ್ಟವಾಗಲಿಲ್ಲ. ಅಮ್ಮ ಕಿವಿಯೋಲೆ ಮತ್ತು ಬಳೆ ಖರೀದಿಸಿದರು.

ಶುಕ್ರವಾರ ಜನವರಿ 9: ಮೌಲಾನಾ ರಜೆ ಹಾಕಿದ್ದಾರಾ?
ಇವತ್ತು ಶಾಲೆಯಲ್ಲಿ ಬುನೈರ್ ಪ್ರವಾಸದ ಬಗ್ಗೆ ಗೆಳತಿಯರಲ್ಲಿ ಹೇಳಿದೆ. ಬುನೈರ್ ಕಥೆ ಕೇಳಿ ಕೇಳಿ ನಮಗೆ ಬೇಸರವಾಗಿದೆ ಎಂದು ಮುಖ ತಿರುಗಿಸಿದರು. ಎಫ್ ಎಮ್ ರೇಡಿಯೋದಲ್ಲಿ ಭಾಷಣ ಮಾಡುತ್ತಿದ್ದ ಮೌಲಾನ ಶಾಹ ದುರಾನ್ ರ ಸಾವಿನ ಬಗ್ಗೆ ಹರಡಿದ್ದ ವದಂತಿಗಳ ಬಗ್ಗೆ ಹರಟಿದೆವು. ಹುಡುಗಿಯರು ಶಾಲೆಗೆ ಹೋಗಬಾರದು ಎಂದು ಘೋಷಿಸಿದ್ದು ಇದೇ ಮೌಲಾನ.

ಕೆಲವು ಹುಡುಗಿಯರು ಮೌಲಾನ ಸತ್ತುಹೋಗಿದ್ದಾರೆ ಎಂದರು; ಉಳಿದವರು ಒಪ್ಪಲಿಲ್ಲ. ನಿನ್ನೆ ರಾತ್ರಿ ಎಫ್ ಎಮ್ ರೇಡಿಯೋದಲ್ಲಿ ಅವರ ಎಂದಿನ ಭಾಷಣ ಬರಲಿಲ್ಲವಾಗಿ ಅವರ ಸಾವಿನ ಗಾಳಿ ಸುದ್ದಿ ಹರಡುತ್ತಿತ್ತು. ಮೌಲಾನ ರಜೆಯ ಮೇಲೆ ಹೋಗಿದ್ದಾರಷ್ಟೇ ಎಂದೊಂದು ಹುಡುಗಿ ಹೇಳಿದಳು.

ಶುಕ್ರವಾರ ಟ್ಯೂಷನ್ ಇಲ್ಲದ ಕಾರಣ ಇಡೀ ಮಧ್ಯಾಹ್ನ ಎಂದಿಗಿಂತ ಹೆಚ್ಚು ಆಟವಾಡುತ್ತ ಕಳೆದೆ. ಸಂಜೆ ಟಿ ವಿ ಮುಂದೆ ಕುಳಿತಾಗ ಲಾಹೋರಿನಲ್ಲಿ ಬಾಂಬ್ ಸ್ಫೋಟವಾದ ಸುದ್ದಿ ಬಿತ್ತರವಾಗುತ್ತಿತ್ತು. ಪಾಕಿಸ್ತಾನದಲ್ಯಾಕೆ ಇಷ್ಟೊಂದು ಬಾಂಬ್ ಸ್ಫೋಟಗಳಾಗುತ್ತವೆ? ನನಗೆ ನಾನೇ ಕೇಳಿಕೊಂಡೆ

ಬುಧವಾರ ಜನವರಿ 14 : ಮತ್ತೆ ಶಾಲೆಗೆ ಹೋಗುವುದು ಅನುಮಾನ
ಇಂದು ಶಾಲೆಗೆ ಹೋಗುವಾಗ ಮನಸ್ಸು ಸರಿಯಿರಲಿಲ್ಲ. ನಾಳೆಯಿಂದ ಚಳಿಗಾಲದ ರಜೆ ಪ್ರಾರಂಭವಾಗುತ್ತದೆ. ಪ್ರಿನ್ಸಿಪಾಲರು ರಜೆಯ ಆರಂಭದ ಬಗ್ಗೆ ನಿನ್ನೆ ತಿಳಿಸಿದರಾದರೂ ಮತ್ತೆ ಶಾಲೆ ಪ್ರಾರಂಭವಾಗುವುದರ ಬಗ್ಗೆ ಏನೂ ಹೇಳಲಿಲ್ಲ. ಇದೇ ಮೊದಲ ಬಾರಿಗೆ ಈ ರೀತಿ ಆಗುತ್ತಿದೆ.

ಮುಂಚೆ ಶಾಲೆ ಪುನಾಂಭವಾಗುವ ದಿನವನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದರು. ಈ ಬಾರಿ ಪ್ರಿನ್ಸಿಪಾಲರು ದಿನಾಂಕವನ್ನೂ ತಿಳಿಸಲಿಲ್ಲ, ಕಾರಣವನ್ನೂ ಹೇಳಲಿಲ್ಲ. ನನ್ನ ಅಂದಾಜಿನಂತೆ ತಾಲೀಬಾನ್ ಜನವರಿ 15ರಿಂದ ಹುಡುಗಿಯರ ಶಿಕ್ಷಣವನ್ನು ನಿಷೇಧಿಸಿರುವುದೇ ಪ್ರಿನ್ಸಿಪಾಲರ ಮೌನಕ್ಕೆ ಕಾರಣ.

ಈ ಬಾರಿ ನಮಗ್ಯಾರಿಗೂ ರಜೆಯ ಬಗ್ಗೆ ಹೆಚ್ಚು ಸಂತಸವಿರಲಿಲ್ಲ. ತಾಲೀಬಾನ್ ಆದೇಶ ಜಾರಿಗೆ ಬಂದರೆ ಮತ್ತೆ ನಾವು ಶಾಲೆಗೆ ಬರಲಾಗುವುದಿಲ್ಲ ಎಂಬ ವಿಷಯ ನಮ್ಮ ಅರಿವಿಗೆ ಬಂದಿತ್ತು. ಕೆಲವು ಹುಡುಗಿಯರು ಮತ್ತೆ ಫೆಬ್ರವರಿಯಲ್ಲಿ ಶಾಲೆ ಪ್ರಾರಂಭವಾಗುವುದರ ಬಗ್ಗೆ ಆಶಾವಾದ ಹೊಂದಿದ್ದರು. ಆದರೆ ಇತರರು ತಮ್ಮ ತಂದೆ ತಾಯಿ ಶಿಕ್ಷಣದ ಸಲುವಾಗಿ ಸ್ವಾತ್ ಪ್ರದೇಶದಿಂದ ಬೇರೆ ನಗರಗಳಿಗೆ ಹೋಗುವ ನಿರ್ಧಾರ ಮಾಡಿರುವುದಾಗಿ ತಿಳಿಸಿದರು.

ಕೊನೆಯ ದಿನವಾದ ಕಾರಣ ಎಂದಿಗಿಂತ ಹೆಚ್ಚು ಸಮಯ ಮೈದಾನದಲ್ಲಿ ಆಟವಾಡಿದೆವು. ಶಾಲೆ ಮತ್ತೆ ಪ್ರಾರಂಭವಾಗುತ್ತದೆಂಬುದು ನನ್ನ ಅಭಿಪ್ರಾಯವಾಗಿತ್ತು. ಆದರೂ ಶಾಲೆಯಿಂದ ಮರಳುವಾಗ ಮತ್ಯಾವತ್ತೂ ಇಲ್ಲಿಗೆ ಬರಲಾರನೆಂಬ ಭಾವದಿಂದ ನಮ್ಮ ಕಟ್ಟಡದ ಕಡೆಗೆ ನೋಡಿದೆ.

ಗುರುವಾರ ಜನವರಿ 15: ಬಂದೂಕಿನ ಮೊರೆತದ ರಾತ್ರಿ.
ರಾತ್ರಿಯಿಡೀ ಬಂದೂಕಿನ ಮೊರೆತದ ಕಾರಣದಿಂದ ನಿದ್ರೆ ಸರಿಯಾಗಿ ಬರಲಿಲ್ಲ. ಮೂರು ಬಾರಿ ಎಚ್ಚರವಾಗಿತ್ತು. ಶಾಲೆಯಿಲ್ಲದ ಕಾರಣ ಹತ್ತರ ಸುಮಾರಿಗೆ ಹಾಸಿಗೆಯಿಂದೆದ್ದೆ. ನಂತರ ಮನೆಗೆ ಬಂದ ಗೆಳತಿಯೊಡನೆ ಹೋಮ್ ವರ್ಕಿನ ಬಗ್ಗೆ ಚರ್ಚಿಸಿದೆ. ಇಂದು ಜನವರಿ 15, ತಾಲೀಬಾನ್ ಆದೇಶ ಜಾರಿಗೆ ಬರಲು ಕೊನೆಯ ದಿನ. ನನ್ನ ಗೆಳತಿ ಇದ್ಯಾವುದರ ಪರಿವೆ ಮಾಡದೇ ಏನೂ ಆಗದವಳ ಹಾಗೆ ಹೋಮ್ ವರ್ಕಿನ ಬಗ್ಗೆ ಮಾತನಾಡುತ್ತಿದ್ದಳು.

ಇಂದು ಬಿಬಿಸಿ ಉರ್ದುಗೆ ಬರೆದ ನನ್ನ ಡೈರಿಯ ಪುಟಗಳನ್ನು ಓದಿದೆ ಮತ್ತು ಪತ್ರಿಕೆಯಲ್ಲಿ ಪ್ರಕಟಿಸಿದೆ. 'ಗುಲ್ ಮಕಾಯಿ' ಎಂಬ ನನ್ನ ಕಾವ್ಯನಾಮವನ್ನು ತಾಯಿ ಮೆಚ್ಚಿದರು. 'ಅವಳ ಹೆಸರನ್ನು ಗುಲ್ ಮಕಾಯಿ ಎಂದೇ ಬದಲಾಯಿಸಬಹುದಲ್ಲವೇ?' ಎಂದು ತಂದೆಯ ಬಳಿ ಹೇಳುತ್ತಿದ್ದರು. ನನಗೂ ಗುಲ್ ಮಕಾಯಿ ಎಂಬ ಹೆಸರೇ ಇಷ್ಟ, ಕಾರಣ, ನನ್ನ ನಿಜ ಹೆಸರಿನ ಅರ್ಥ' ದುಃಖ ಭರಿತಳು'!

ತಂದೆ ಹೇಳುತ್ತಿದ್ದರು, ಕೆಲವು ದಿನಗಳ ಹಿಂದೆ ಡೈರಿಯ ಪ್ರಿಂಟ್ ಔಟನ್ನು ಒಬ್ಬರ್ಯಾರೋ ತೆಗೆದುಕೊಂಡು ಬಂದು ಎಷ್ಟು ಚೆಂದ ಬರೆದಿದ್ದಾರಾಲ್ವ ಎಂದು ಹೊಗಳುತ್ತಿದರಂತೆ. ಬರೆದಿರುವುದು ನನ್ನ ಮಗಳು ಎಂದು ಹೇಳಿಕೊಳ್ಳಲಾಗದೆ ತಂದೆ ಮುಗುಳ್ನಕ್ಕು ಸುಮ್ಮನಾದರಂತೆ! 

ನಿಮ್ಮ ಅಬಿಪ್ರಾಯ ಬರೆಯಿರಿ 

ವಿವೇಕಾನಂದ ನುಡಿಮುತ್ತುಗಳು

ಸ್ವೀಕರಿಸುವ ಮನಸಿದ್ದರೆ ಸದ್ಗುಣಗಳನ್ನು ಸ್ವೀಕರಿಸು
ಈಜುವ ಮನಸಿದ್ದರೆ ಜ್ಞಾನ ಸಾಗರದಲ್ಲಿ ಈಜು
ನಡೆಯುವ ಮನಸಿದ್ದರೆ ಸನ್ಮಾರ್ಗದಲ್ಲಿ ನಡೆ
ಮಾತನಾಡುವುದಿದ್ದರೆ ಸತ್ಯವನ್ನೇ ಮಾತನಾಡು
ಹಾಡುವುದಿದ್ದರೆ ಅನುಭವದ ಮಾತುಗಳನ್ನೇ ಹಾಡು
ಕೇಳುವುದಿದ್ದರೆ ಸದುಪದೇಶಗಳನ್ನು ಕೇಳು
ದೊರಕಿಸುವುದಿದ್ದರೆ ಜಯವನ್ನೇ ದೊರಕಿಸು
ನುಂಗುವ ಇಚ್ಚೆಯಿದ್ದರೆ ಸಿಟ್ಟನ್ನೇ ನುಂಗು


ಭಾರತೀಯರಲ್ಲಿ ದೊಡ್ಡದೊಂದು ದೋಷವಿದೆ.ನಾವು ಒಂದು ಸ್ಥಿರವಾದ ಸಂಸ್ಥೆಯನ್ನು ಕಟ್ಟಲಾರೆವು. ಕಾರಣವೇನೆಂದರೆ ಅಧಿಕಾರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಮಗೆ ಇಷ್ಟವಿಲ್ಲ. ನಾವು ಕಾಲವಾದ ಮೇಲೆ ಇದರ ಗತಿ ಏನೆಂಬುದನ್ನು ಕುರಿತು ಚಿಂತಿಸುವುದೇ ಇಲ್ಲ.
- ಸ್ವಾಮಿ ವಿವೇಕಾನಂದ


ವಿಕಾಸವೇ ಜೀವನ;ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ,ಸ್ವಾರ್ಥವೆಲ್ಲಾ ಸಂಕೋಚ. ಆದ್ದರಿಂದ ಪ್ರೇಮವೇ ಬದುಕಿನ ಧರ್ಮ.
- ಸ್ವಾಮಿ ವಿವೇಕಾನಂದ


ಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು.
- ಸ್ವಾಮಿ ವಿವೇಕಾನಂದ


ನೀವು ಯಾವುದೇ ಕೆಲಸವನ್ನು ಮಾಡುವಾಗಲೂ ನಿಮ್ಮ ಮನಸ್ಸು ಹೃದಯ, ನಿಮ್ಮ ಸರ್ವಸ್ವವನ್ನೂ ಆಕೆಲಸಕ್ಕೆ ಕೊಡಿ. ನಾನೊಮ್ಮೆ ಒಬ್ಬ ಸಾಧು ಮಹಾತ್ಮನನ್ನು ನೋಡಿದ್ದೆ. ಆತ ಪೂಜೆ, ಧ್ಯಾನಗಳನ್ನು ಎಷ್ಟು ಏಕಾಗ್ರತೆ ಶ್ರದ್ಧೆಗಳಿಂದ ಮಾಡುತ್ತಿದ್ದನೋ ಅಷ್ಟೇ ಸಾವಧಾನದಿಂದ ತನ್ನ ಆಡುಗೆ ಮಾಡುವ ಹಿತ್ತಾಳೆ ಪಾತ್ರೆಗಳನ್ನು ಫಳ ಫಳನೆಹೊಳೆಯುವ ಚಿನ್ನದಂತೆ ತೊಳೆದಿಡುತ್ತಿದ್ದನು.

- ಸ್ವಾಮಿ ವಿವೇಕಾನಂದ
ದಯವಿಟ್ಟು ನಿಮ್ಮ ಅಬಿಪ್ರಾಯ ಬರೆಯಿರಿ  

ಅತ್ಯಂತ ಅಪಾಯಕಾರಿ ಸೆಲೆಬ್ರಿಟಿ ಸನ್ನಿ ಲಿಯೋನ್!

ಅತ್ಯಂತ ಅಪಾಯಕಾರಿ ಸೆಲೆಬ್ರಿಟಿ ಸನ್ನಿ ಲಿಯೋನ್!

ಅಂತರ್ಜಾಲದಲ್ಲಿ ಅತಿ ಅಪಾಯಕಾರಿ ಸೆಲೆಬ್ರಿಟಿ ಯಾರು? ಈ ಬಗ್ಗೆ ಸಾಕಷ್ಟು ಚರ್ಚೆಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ. ಆದರೆ ಈಗ ಸಾಕಷ್ಟು ಸಮೀಕ್ಷೆ ನಡೆಸಿದ ಅಧ್ಯಯನ ತಂಡವೊಂದು ಅದು ಕಾಮಕನ್ಯೆ ಸನ್ನಿ ಲಿಯೋನ್ ಎಂಬ ಸತ್ಯವನ್ನು ಬಹಿರಂಗಪಡಿಸಿದೆ. ಯಾವುದೇ ವಯಸ್ಸಿನ, ಯಾವುದೇ ದೇಶದ ಜನರಾಗಲೀ ಸನ್ನಿ ಲಿಯೋನ್ ಅವರನ್ನು ನೋಡಲು ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಾಡುತ್ತಾರೆ ಎಂಬ ಅಂಶವೀಗ ಬಹಿರಂಗಗೊಂಡಿದೆ.
ಇಂಟರ್ ನೆಟ್ ನಲ್ಲಿ 'ಸನ್ನಿ ಲಿಯೋನ್' ಅತ್ಯಂತ ಅಪಾಯಕಾರಿ ಸೆಲೆಬ್ರಿಟಿ. ಅವರಷ್ಟು ನಿದ್ದೆಗೆಡಿಸಿದ ನಟಿಯರು ಬೇರೆ ಯಾರೂ ಇಲ್ಲ. ಸನ್ನಿ ಜಪ ಮಾಡಿದಷ್ಟು ಬೇರೆ ಯಾವುದೇ ನಟಿ ಅಥವಾ ಮಾಡೆಲ್ ಜಪ ಪ್ರಪಂಚದಲ್ಲಿ ನಡೆಯುವುದಿಲ್ಲ. ಎಂತವರೂ ಕೂಡ ಸನ್ನಿ ಲಿಯೋನ್ ಫೋಟೋ ಕಂಡೊಡನೆ ರಸಿಕನಾಗಬಲ್ಲ. ಅಂತಹ ಮಾಂತ್ರಿಕ ಮೈಮಾಟ, ಹಾಗೂ ಲುಕ್ ಸನ್ನಿಯದ್ದು. ಮನುಷ್ಯರ ಮನಸ್ಸಿನಲ್ಲಿ ಭೀಕರ ಬಿರುಗಾಳಿ ಮಹಾ ಚಂಡಮಾರುತಕ್ಕೆ ಕಾರಣವಾಗುವ ಮಟ್ಟಿಗೆ ಸನ್ನಿ ಲಿಯೋನ್ ಅಪಯಕಾರಿ.
ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಚರ್ಚೆಗೆ ಗುರಿಯಾದ ನಟಿ, ಸೆಲೆಬ್ರಿಟಿ ಈ 'ಸನ್ನಿ ಲಿಯೋನ್'. ಸನ್ನಿ ಫೋಟೋ ನೋಡಿ ಕಣ್ಣು ತುಂಬಿಕೊಂಡವರು ಅಸಂಖ್ಯಾತ! ಯಾವುದೇ ಸಿಗ್ಗಿಲ್ಲದೆ ಆಕೆ ನಟಿಸಿರುವ ಕಾಮದಾಟದ ದೃಶ್ಯಗಳನ್ನು ನೋಡಿ ಮೈ ಬೆಚ್ಚಗಾಗಿಸಿಕೊಂಡವರು ಕೋಟ್ಯಾಂತರ ಮಂದಿ. ಅವರಿಗಾಗಿಯೇ ಕೋಟ್ಯಾಂತರ ಮಂದಿ ಅಂತರ್ಜಾಲದ ವಿವಿಧ ತಾಣಗಳಿಗೆ ಭೇಟಿ ನೀಡುತ್ತಾರೆ, ಹುಡುಕುತ್ತಾರೆ ಎಂಬುದು ಅಚ್ಚರಿ ಹಾಗೂ ವಾಸ್ತವ.
ಇದೊಂದೇ ವಿಷಯದಲ್ಲಿ ಅಲ್ಲ, ಅಪರಿಚಿತ ತಾಣದಲ್ಲಿ ಆಕೆಯ ಫೋಟೊ ಅಥವಾ ವೀಡಿಯೋ ಕಂಡರೆ ಸಾಕು, ತಕ್ಷಣ ಕ್ಲಿಕ್ ಮಾಡಿಬಿಡುತ್ತಾರೆ. ಅಲ್ಲಿಗೆ ಕಥೆ ಮುಗಿದಂತೆ. ಮಹಾಮಾರಿ ವೈರಸ್ ದಾಳಿ ಪ್ರಾರಂಭವಾಗಿ ಬಿಡುತ್ತದೆ. ಇಂಟರ್ ನೆಟ್ ನಲ್ಲಿ ಇರುವ ಸಾವಿರಾರು ವೈಬ್ ಸೈಟ್ ಗಳಲ್ಲಿ ಹೀಗೆ ಸನ್ನಿ ಹುಡುಕುವುದರಿಂದ ಕ್ಷಣಾರ್ಧದಲ್ಲಿ ಹೇರಳ ವೃಸ್ ಗಳು ಅಲ್ಲಿಂದಿಲ್ಲಿಗೆ ಓಡಾಡಿಬಿಡುತ್ತವೆ. ಶೇ. 10 ರಷ್ಟು ಸನ್ನಿ ಹುಡುಕಾಟದ ಮೂಲಕವೇ ವೈರಸ್ ಓಡಾಡುತ್ತದೆಯಂತೆ.
ಹೀಗಾಗಿ ಸನ್ನಿ ಎಲ್ಲಾ ರೀತಿಯಿಂದ ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಈಗ, ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಕತ್ರಿನಾ ಎರಡನೆ ಸ್ಥಾನಕ್ಕೆ ಸರಿದಿದ್ದರೆ ಕಳೆದ ವರ್ಷ ಎರಡರಲ್ಲಿದ್ದ ಕರೀನಾ ಮೂರನೆ ಸ್ಥಾನಕ್ಕೆ ಜಾರಿದ್ದಾರೆ. ಮೊದಲ ಸ್ಥಾನವನ್ನು ಇನ್ಯಾರು ಗಳಿಸಿದ್ದಾರೆ ಎಂಬುದು ಅರ್ಥವಾಯಿತಲ್ಲವೇ? ಹೌದು, ನಿಮ್ಮ ಊಹೆಯಂತೆಯೇ ಅದು ಸನ್ನಿ ಲಿಯೋನ್......

ದಯವಿಟ್ಟು ನಿಮ್ಮ ಅನಿಸಿಕೆ ತಿಳಿಸಿ ಓದಿದ ನಂತರ ..
ನಿಮ್ಮ ನಾರಾಯಣಗೌಡ 

ಮಂಗಳವಾರ, ಸೆಪ್ಟೆಂಬರ್ 25, 2012

Friends..ಧೈರ್ಯಗೆಡಬೇಡಿ ಹೊಸದಾಗಿ ಆರಂಬಿಸಿ...

ಧೈರ್ಯಗೆಡಬೇಡಿ ಹೊಸದಾಗಿ ಆರಂಬಿಸಿ

ಪ್ರಯತ್ನ ಮಾಡಿಯೂ ಯೆಶಸ್ಸುಸಿಗದೇ ಹೋದರೆ ನಿರಾಶೆಪಡಬೇಡಿ
ಇದರ ಬದಲು ..
21 ವರ್ಷದಲ್ಲಿ ಆಡಳಿತ ಮಂಡಳಿಯ ಚುನಾವಣೆಗೆ ಸ್ಪರ್ದಿಸಿ
ಸೋತ ವ್ಯಕ್ತಿಯನ್ನು ನೆನಪಿಸಿಕೊಳ್ಳಿ.
22 ವರ್ಷದಲ್ಲಿ ಮದುವೆಯಾದ ಆದರೆ ಅಲ್ಲೂ ಅಪಯೇಶಸ್ಸು.
24ವರ್ಷದಲ್ಲಿ ಉದ್ಯೋಗಮಾಡಲು ಪ್ರಯತ್ನಪಟ್ಟ ಅಲ್ಲೂ ಸೋತ.
27 ವರ್ಷದಲ್ಲಿ ಪತ್ನಿಗೆ ವಿಚ್ಛೇದನ ನೀಡಿದ.
32 ವರ್ಷದಲ್ಲಿ ಲೋಕಸಭೆಗೆ (ಸಂಸತ್ತು) ಚುನಾವಣೆಗೆ ಸ್ಪರ್ದಿಸಿ ಅಲ್ಲೂ ಅವನಿಗೆ ಸೋಲು.
37 ವರ್ಷದಲ್ಲಿ ಕಾಂಗ್ರೆಸ ನ ಸೆನೆಟ್ ಸ್ಥಾನಕ್ಕಾಗಿ  ಸ್ಪರ್ದಿಸಿದ ಅಲ್ಲೂ ನಿರಾಶೆ..
42 ವರ್ಷದಲ್ಲಿ ಸಂಸದನ ಸ್ತಾನಕ್ಕೆ ಸ್ಪರ್ದೆ ಪುನಃ ಸೋಲು.
47 ವರ್ಷದಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ದೆ ಮತ್ತೆ ಅದೇ ಸೋಲು.
ಆದರೆ ವ್ಯಕ್ತಿ 51 ವರ್ಷದಲ್ಲಿ ಅಮೆರಿಕ ದೇಶದ ರಾಷ್ಟ್ರಪತಿಯಾದ ಆತನ ಹೆಸರು ಅಬ್ರಹಾಂ ಲಿಂಕನ್..
.ಧೈರ್ಯಗೆಡಬೇಡಿ ಹೊಸದಾಗಿ ಆರಂಬಿಸಿ..ಯೆಶಸ್ಸು ನಿಮದೇ ಆಗುತೆ ..ನಿಶ್ಚಿತ ..
ಇಂತಿ
ನಿಮ್ಮ ನಾರಾಯಣಗೌಡ

ಸೋಮವಾರ, ಸೆಪ್ಟೆಂಬರ್ 24, 2012

ಸುಲಭವಲ್ಲ ಅನ್ನುವುದನ್ನು ಬಿಟ್ಬಿಡಿ

ಸುಲಭವಲ್ಲ ಅನ್ನುವುದನ್ನು ಬಿಟ್ಬಿಡಿ
ಮುರಿದು ಬಿದ್ದ ಪ್ರೇಮ ಮರೆಯೋದು ಅಷ್ಟೊಂದು ಸುಲಭವಲ್ಲ. ಹಾಗಂತ ಎಷ್ಟು ದಿನ ಅಂತ ಅದರ ನೆನಪಲ್ಲೇ ಮರುಗುತ್ತೀರ? ನೆನಪು ಮಾಡಿಕೊಳ್ಳಬೇಡಿ ಅಷ್ಟೆ. ಹಳೆ ಪ್ರೇಮಿ ಜತೆ ನಿಮ್ಮ ಸಂಗಾತಿ ಹೋಲಿಸುವ ಕೆಟ್ಟಗುಣ ಬಿಟ್ಟುಬಿಡಿ. ವಿಪರೀತ ಗೊಂದಲ ಉಂಟಾಗುತ್ತಿದ್ದರೆ ಇತರೇ ಕೆಲಸಗಳಲ್ಲಿ ಬ್ಯೂಸಿಯಾಗಿರಿ. ಧ್ಯಾನ ಮಾಡಿ.

ಹಳೆ ಪ್ರೇಮಿ ಎದುರಾದರೆ

ಹಳೆ ಪ್ರೇಮಿ ಎದುರಾದರೆ
ಹಳೆ ಪ್ರೇಮಿ ಇನ್ಯಾವತ್ತೂ ಎದುರಾಗದೇ ಇರಲಿ ಅಂತೆಲ್ಲ ಜಪಿಸುವಾಗ ಆಕಸ್ಮಿಕವಾಗಿ ಎದುರಾದರೆ ಹೇಗಾಗಬೇಡ? ನಿರೀಕ್ಷೆ ಇಲ್ಲದೆಯೇ ಇದ್ದಕ್ಕಿದ್ದಂತೆ ಎದುರಾದವನ ಎದುರು ನಿಂತಾಗ ಮೈಯೆಲ್ಲ ಬೆವತು ಹೋದಂತಾಗಿ ಭಯದಿಂದ ಹೃದಯ ಮತ್ತಷ್ಟು ಬಡಿದುಕೊಂಡಂಥ ಅನುಭವ. ನೋಟವೇ ಭಯ ಬೀಳಿಸಿರುವಾಗ ಮಾತನಾಡುವ ಆಸಕ್ತಿ ಉಳಿದಿರುವುದಿಲ್ಲ. ಪಕ್ಕದಲ್ಲಿರುವ ಪತಿ ಅದೇನು ಅಂದುಕೊಂಡಾನೋ ಅನ್ನುವ ಭಯದಿಂದಲೇ ಮುಖ ತಿರುವಿಕೊಂಡು ಹೋಗುವವಳ ಬಗ್ಗೆ ಹಳೆ ಪ್ರೇಮಿಗೆ ಅಸಮಾಧಾನ.

ಬಿಟ್ಟಿರಲು ಅಸಾಧ್ಯ ಅನ್ನುವಷ್ಟು ಹತ್ತಿರವಾದಾಗ ಇದೀಗ ಅಪರಿಚಿತ ನೋಟ ಬೀರಿ ಹೋದ ಹುಡುಗಿಯ ಬಗ್ಗೆ ಮತ್ತಷ್ಟು ಕೋಪ. ಸೌಜನ್ಯಕ್ಕೂ ಮಾತನಾಡಿದವಳ ಬಗ್ಗೆ ಸೇಡು ತೀರಿಸಿಕೊಳ್ಳುವ ಭಾವ. ಇಲ್ಲಸಲ್ಲದ್ದನ್ನು ಪ್ರಚಾರ ಮಾಡುವ ತನಕ ಹೋಗುತ್ತಾನೆ ಅಥವಾ ಮನಸ್ಸಲ್ಲೇ ಕೊರಗಬಹುದು.

ಕಾರಣ ಏನೇ ಇರಲಿ, ಆದರೆ ಅದು ಮುರಿದು ಬಿದ್ದಿದೆ ಅಂತಾದ ಮೇಲೆ ಮುಗೀತು ಅದರ ಆಯುಷ್ಯ. ಬಿಟ್ಬಿಡಿ ಅದನ್ನ. ಮತ್ತೇ ಮತ್ತೆ ಕೊರಗಿದರೆ ಅಥವಾ ಚಿಕ್ಕದೊಂದು ಗಿಲ್ಟ್ ಕಾಡುತ್ತಿದ್ದರೆ ನಿಮ್ಮ ಮುಂದಿನ ಬದುಕಿನ ಸುಂದರ ಕ್ಷಣಗಳನ್ನು ಕಳೆದುಕೊಳ್ಳುತ್ತೀರ.

'ನಿನ್ನಾಣೆಗೂ ಇಲ್ಲ

  'ನಿನ್ನಾಣೆಗೂ ಇಲ್ಲ

ಮದುವೆಗೂ ಮುಂಚೆ ಯಾರನ್ನೂ ಪ್ರೀತಿಸಲಿಲ್ಲವಾ? ಪದೇಪದೆ ಅಂವ ಕೇಳಿದಾಗಲೆಲ್ಲ 'ನಿನ್ನಾಣೆಗೂ ಇಲ್ಲ 'ಎಂದವಳು ಪುನಃ ಮಾತು ಮುಂದುವರೆಸುವುದಿಲ್ಲ. ಮೌನವಾಗಿ ಬಿಡುತ್ತಾಳೆ ಅವಳು.

ಆ ಮೌನದಲ್ಲಿ ಅದೇನೋ ಗುಟ್ಟು ಇದೆ ಅಂತೆಲ್ಲ ಅನುಮಾನಪಡುವಷ್ಟು ಅಂವ ಸಿಲ್ಲಿಯಲ್ಲ. ಬೆಟ್ಟದಂಥ ಪ್ರೀತಿ ಹೊತ್ತು ಅವಳಿಗಾಗಿ ಬದುಕು ಅನ್ನುವಷ್ಟು ಅಂವ ಭಾವುಕನಾಗುತ್ತಾನೆ. ಆತನ ಪ್ರೀತಿಯಲ್ಲಿ ಕಳೆದು ಹೋಗಬೇಕು ಅಂದುಕೊಂಡಾಗೆಲ್ಲ ಮತ್ತದೇ ಹಳೆಯ ಪ್ರೇಮಿ ನೆನಪು ಜೀವ ಹಿಂಡಿ ಬಿಡುತ್ತದೆ. ಅದ್ಯಾವುದೋ ಅಪರಾ ಭಾವ, ಇನ್ಯಾವುದೋ ತಳಮಳ ಅವಳನ್ನು ಹೊಸ ಬದುಕಿಗೆ ಹೊಂದಿಕೊಳ್ಳಲು ಬಿಡುವುದಿಲ್ಲ.

ಎಲ್ಲವನ್ನೂ ಹೇಳಿ ಬಿಡಬೇಕು ಅಂದೆನಿಸಿದರೂ ಆತ ಏನಂದುಕೊಳ್ಳುವನೋ ಅನ್ನುವ ಭಯ. ಇದೇ ಭಯ ಜೀವನಪೂರ್ತಿ ಕಾಡಿ ಬಿಡುತ್ತದೆ. ವಿಪರೀತ ಪ್ರೀತಿಸುವ ಪತಿಗೆ ಮೋಸ ಮಾಡಿದನೇನೋ ಅನ್ನೋ ಗಿಲ್ಟ್ ಜತೆಗಿಟ್ಟುಕೊಂಡೇ ಹೇಗೋ ಎಲ್ಲವನ್ನು ಮರೆಯಲು ಪ್ರಯತ್ನಿಸುತ್ತಾಳೆ.

ಕಾಣದ ಪ್ರೀತಿ'

ಕಾಣದ ಪ್ರೀತಿ'

ಕಾಣದಂತ ಅವಳ ಆ ಪ್ರೀತಿಯು,
ದೂರದಿಂದ ಕೈ ಚಾಚಿದೇ.

ನೋಡಲು ನಾ ಹೋದರೆ,
ಅವಳ ಉಸಿರಿನ ತಂಗಾಳಿಗೆ ನನ್ನೇ ಮರೆತು...
ಮೈ ಮರೆಯುವೆ.

ಕಣ್ ಮುಚ್ಚಿ ನಾ ಸವೆಯೋ ಆ ಪ್ರೀತಿ ಸೊಗಸಾಗಿದೆ.

ಎದೆಯಲ್ಲಿರೋ ಅವಳೊಲವು ನನ್ನನೀಗ ಬಾ ಎಂದಿದೆ.

ಮರೆಯಾಗಿ ಕಾಡುವ ಅವಳ್ಯಾರೋ ನಾ ಕಾಣೇನೆ.

ಕಾಣದೆ ಇರುವ ಆ ಪ್ರೀತಿಯು ನನ್ನನೀಗ ಅವಳಲಿ ಸೆರೆಮಾಡಿದೆ.

ಸೆರೆಹೂದೇನು ಕಾಣದ ಆ ಪ್ರೀತಿಗೆ.....................

ಪ್ರೀತಿ ಎಂದರೇನು?ಬೇಕು ಪ್ರೀತಿ.

ಪ್ರೀತಿ,ಪ್ರೇಮ,ಸ್ನೇಹ,ಹೊಂದಾಣಿಕೆ,ಆತ್ಮೀಯತೆ,ಪರಸ್ಪರ ವಿಶ್ವಾಸ,ನಂಬಿಕೆ....ಇವೆಲ್ಲಾ ಇದ್ದಲ್ಲಿ ಜೀವನ ಎಷ್ಟು ಮಧುರ!
ಕೆಲವರನ್ನು ಕಂಡೊಡನೆ ಏನೋ ಆತ್ಮೀಯತೆ,ಒಲವು,ನಮ್ಮವರು ಎಂಬ ಭಾವನೆ.ಅವರಿಗಾಗಿ ಮಿಡಿಯುವ ಮನ,ಬಡಿಯುವ ಹೃದಯ,ಭಾವನೆಗಳ ಮಹಾಪೂರ.ನನ್ನವನು,ನನ್ನವಳು ಎಂಬ ಭಾವನೆ.
ಕೆಲವೇ ದಿನಗಳಲ್ಲಿ ಆತ ಆಕೆಯ ಮನಕ್ಕೆ ಹತ್ತಿರವಾಗಿದ್ದ.ಐ ಮಿಸ್ ಯು, ಐ ಲವ್ ಯು, ಎಂದು ಪದಗಳ ವಿನಿಮಯವಾಗಲು ಶುರು.ಏನಿದು ಲವ್? ಎಷ್ಟು ಸುಲಭವಾಗಿ ಎಲ್ಲರೂ ಈ ಪದ ಬಳಕೆಮಾಡುತ್ತಾರಲ್ಲ?ಆತನ ಪ್ರಕಾರ
ಲವ್ ಎಂದರೆ ಸಂತೋಷ ಹಾಗೂ ನೆಮ್ಮದಿ ಅಥವಾ ಸಮಾಧಾನ .ಯಾರಿಂದ ಇದು ದೊರಕುವುದೋ ಅವರಿಗೆ ಐ ಲವ್ ಯು.ಎನ್ನುತ್ತೇವೆ. ಎóಷ್ಟು ಚೆಂದಾದ ಉತ್ತರ.ಪ್ರೀತಿ ಎಲ್ಲರ ಜೀವನದಲ್ಲಿ ಅತ್ಯವಶ್ಯಕ.ಆರೋಗ್ಯಕ್ಕೂ ಮುಖ್ಯ.ಆದರೆ ಈಗಿನ ಕಾಲದಲ್ಲಿ ಅದು ದೊರೆಯುವುದಾದರೂ ಎಲ್ಲಿಂದ?ಗಂಡ ಹೆಂಡತಿ ಸಂಸಾರದ ಹೊಣೆ,ತಾಪತ್ರಯ ಇವುಗಳಲ್ಲೇ ಮುಳುಗಿ, ಕೆಲವೊಮ್ಮೆ ವಾದ,ವಿವಾದ,ಚರ್ಚೆ,ಮುನಿಸು,ಜಗಳ,ಜವಾಬ್ದಾರಿ,ಮಕ್ಕಳು,ಮನೆ,ಸಾಲ ಇವುಗಳಿಗೇ ತಮ್ಮ ಜೀವನವನ್ನು ಮುಡಿಪಾಗಿಸುತ್ತಾರೆ.ತಮಗಾಗಿ?ಸಮಯ?ಪ್ರೀತಿ ಸಂತೋಷದ ರಸ ನಿಮಿóಷಗಳು?ಇವೆಲ್ಲಾ ನಿರ್ಲಕ್ಷ್ಯಗೊಂಡ,ಮೂಲೆಗಿರಿಸಿದ ಮೌಲ್ಯಗಳು.
ನಮ್ಮ ಸಂಗಾತಿಯೊಡನೆ ನಮಗೆ ಸಂಪೂರ್ಣ ಭಾವನಾತ್ಮಕ ಸಂತೃಪ್ತಿ ದೊರೆತಿರಬಹುದು ಅಥವಾ ಸ್ವಲ್ಪ ಕೊರತೆಯಾಗಿರಬಹುದು.ಅತ್ಯಂತ ಆತ್ಮೀಯವಾದ,ಪ್ರಿಯವಾದ ಸ್ನೇಹಿತ,ಸ್ನೇಹಿತೆಯ ಮೂಲಕ ಅದು ದೊರೆಯುವುದು. ಆದರೆ ಇದು ಎóಷ್ಟು ಜನರಿಗೆ ಲಭ್ಯ?ಅವರಿಬ್ಬರೂ ಸ್ನೇಹಿತರಾಗಿ,ಭಾವನೆಗಳು,ಮನಸ್ಸು ಹೊಂದಾಣಿಕೆಯಾಗಿ ಪರಸ್ಪರ  ಆಕರ್ಷಿತರಾಗಿ ಎರಡು ದೇಹ,ಒಂದೇ ಮನಸ್ಸು ಎಂಬಂತಾಗಿದ್ದು ಕೆಲವೇ ದಿನಗಳಲ್ಲಿ.ಆತ ಅಕೆಗೆ ತೋರುತ್ತಿದ್ದ ಪ್ರೀತಿ,ಗೌರವ,ಮಾರ್ಗದರ್ಶನ,ಸಹಕಾರ,ಮೆಚ್ಚುಗೆ,ಒಲವು,ಪ್ರತಿ ಹಂತದಲ್ಲೂ ಆಕೆಯನ್ನು ಕೈಹಿಡಿದು ನಡೆಸುವ ರೀತಿಗೆ ಆಕೆ ಸಂಪೂರ್ಣ ಮಾರುಹೋಗಿದ್ದಳು.ಎಂದೂ,ಒಮ್ಮೆಯೂ ಸಿಡುಕದ,ಸಿಟ್ಟಾಗದ ಆತನ ವ್ಯಕ್ತಿತ್ವ ಸವಾಲಾಗಿತ್ತು.ಆತನಿಂದ ಜೀವನದಲ್ಲಿ ಕಲಿಯುವುದು ಬಹಳಷ್ಟಿದೆ ಎಂಬುದನ್ನರಿತಳು.ಆತನ ಮಾತಿಗೆ,ಪ್ರೀತಿಗೆ ಮಾರುಹೋಗಿ ಗಂಟೆಗಟ್ಟಲೆ ಜೊತೆಯಾಗಿ ಕುಳಿತು ಪರಸ್ಪರ ಮುಖಾಮುಕಿ,ಮಾತನಾಡುತ್ತಾ ಕಳೆದ ಸಮಯವೆಷ್ಟೋ?ಕಲಿತ ವಿಷಯಗಳೆಷ್ಟೋ?ವೃತ್ತಿ ಬೇರೆ,ಭಾಷೆ ಬೇರೆಯಾದರೇನು?ನೋಟ,ನಗು,ಮೌನ,ಕಂಗಳು,ಸ್ಪರ್ಷ ಇವು ಮನದಾಳದ ಇಂಗಿತ,ಭಾವನೆ,ಇಚ್ಚೆ ಎಲ್ಲವನ್ನೂ ರವಾನಿಸುವ,ಅರ್ಥೈಸುವ ಸೇತುವೆಗಳಾಗಿದ್ದವು.ನನಗಾಗಿ ನೀನು,ನಿನಗಾಗಿ ನಾನು ಎಂಬಂತೆ ಎರಡು ಹೃದಯಗಳೂ ಲಯಬಧ್ದವಾಗಿ ಹಾಡುತ್ತಾ,ಬಡಿಯುತ್ತಾ,ಸಂತೋಷದ ಅಲೆಗಳನ್ನು ತೇಲಿ ಬಿಡುತ್ತಾ,ಹೆಜ್ಜೆಹೆಜ್ಜೆಗೂ ಜೊತೆಯಾಗಿ,ನಗುವಿನ ತರಂಗಗಳು ಒಂದಾಗಿ,ಸುಮಧುರ ಕಂಠಗಳು ಹಕ್ಕಿಗಳ ಚಿಲಿಪಿಲಿಗೆ ಸವಾಲಾಗುತ್ತಿದ್ದಂತೆ ,ಎದುರು ಬಂದ ಅಲೆಗಳೆಷ್ಟೋ?ಎಲ್ಲೇ ಇರು,ಹೇಗೇ ಇರು ಎಂದೆಂದಿಗೂ ನಾನು ನಿನ್ನವನು ಎಂದು ಆಕೆಯ ಕೈಗೆ ಮುತ್ತಿಟ್ಟು ಆತ ಕೊಟ್ಟ ಭಾಷೆ,ಎಂದೆಂದಿಗೂ ನಿಜವೆಂಬುದು ಆಕೆಗೆ ಗೊತ್ತು.ಜೀವನ ಇನ್ನೆಷ್ಡು ದಿನ?ವಯಸ್ಸಾಗುತ್ತಾ ಬಂದಿದೆ.ಈಗ ನಮ್ಮಜೀವನಕ್ಕೂ ಒಂದು ಆರ್ಥ,ಸುಖ,ಸಂತೋಷ ಬೇಕಲ್ಲವೇ?
ನೆಮ್ಮದಿ ಕೊಡಬಹುದಾದಂತಹ ಸ್ನೇಹಿತನೊಡನಿರುವುದು ತಪ್ಪೇ?ಎಂಬೆಲ್ಲಾ ಆಕೆಯ ಮನದಾಳದ ಪ್ರಶ್ನೆಗಳು.ಮೂರನೆಯ ವ್ಯಕ್ತಿಯ ಮಾತಿಗೆ ಬೆಲೆಕೊಟ್ಟು ಬೆರೆಯವರಿಗಾಗಿ ಇನ್ನೆಷ್ಟು ವರ್ಷ ಜೀವನ ಸಾಗಿಸುವುದು?ಆತ್ಮಸಾಕ್ಷಿಗೆ ಸರಿಯಾಗಿ ನಡೆದರೆ ಸಾಕಲ್ಲವೇ?ಅವರಿಬ್ಬರಲ್ಲೂ ದೈಹಿಕ ಆಕರ್ಷಣೆ ಸಹಜ.ಆದರೆ ಅದಕ್ಕಿಂತ ಹೆಚ್ಚು ಪರಸ್ಪರ ನಾವಿಬ್ಬರೂ ಒಂದು,ನೀನು ನನ್ನವ,ನಾನು ನಿನ್ನವಳು ಎಂಬ ಭಾವನೆ.ಏನೇ ವಿಷಯ ಮಾತನಾಡಲೂ ಯಾವುದೇ ಅಡೆ ತಡೆ ಗಳಿಲ್ಲ.ನಾಚಿಕೆ,ಮುಜುಗರವಿಲ್ಲ.ಅವರಿಬ್ಬರ ಸ್ನೇಹ ಹೀಗೇ ಮುಂದುವರೆಯಲಿ.ಉನ್ನತ ವಿಚಾರಗಳು, ವಿಷಯಗಳ ಚರ್ಚೆ,ಜನೋಪಕಾರಿ ಕೆಲಸ ಕಾರ್ಯಗಳು, ಇವರ ಜೊತೆಗೂಡುವಿಕೆಯ ಸಾಕ್ಷಿಯಾಗಲಿ.
ಆಕೆಯ ನಡೆ,ನುಡಿ.ಬಾಷೆ,ವ್ಯಕ್ತಿತ್ವ,ಓಕೆ ಎನ್ನಬಹುದಾದ ಸೌಂದರ್ಯದಿಂದ ಆತನಿಗೂ ಇಷ್ಟವಾzಳುÀ ಆಕೆ , ಉಪಯುಕ್ತ ಕೆಲಸಗಳನ್ನು ಮಾಡುತ್ತಾ ಸಾಗಲು ಹೊರಟಿರುವ ಪಯಣ.ಅತ್ಯಂತ ಸರಳತೆಯ ಆತನ ಜೀವನ,ಕೆಲಸದಲ್ಲಿ ಶ್ರಧ್ದೆ,ನಿಷ್ಟೆ,ಶಿಸ್ತು,ಎಲ್ಲರನ್ನೂ ಪ್ರೀತಿಸುವ ಹೃದಯ, ಆತನ ಮಾತಿಗೆ,ಕಾರ್ಯ ವೈಖರಿಗೆ,ಭಾಷೆಗೆ,ಭಾಷಣಕ್ಕೆ ಮನಸೋತು ಕಾಡುವ ಹಿಂಡು,ಹಿಂಡು ಜನ,ವಿಷೇಶ ವ್ಯಕ್ತಿ ಅತ!
ನಿನ್ನ ನೋಟ ನನಗೆ ಹಿತ, ನಿನ್ನ ಕಾಣದೆ ಇರೆನು ನಾನು,ಜೊತೆಯಾಗಿರೋಣ,ರೆಕ್ಕೆಯಿದೆಯೆಂಬಂತೆ ಹಾರೋಣ,ನಕ್ಕು ನಲಿಯೋಣ,ಯಾವ ಹಕ್ಕಿಗೇನು ಕಮ್ಮಿ, ಜೊತೆಯಾಗಿ ಹೆಜ್ಜೆಹಾಕೋಣ,ಚರ್ಚಿಸುತ್ತಾ,ಗುರಿ ತಲುಪಲು ತಂತ್ರ ರಚಿಸುತ್ತಾ,ಪ್ರೀತಿ ಮಾಡುತ್ತಾ!ನೀ ನನಗೆ ಕೊಡುವ ನೆಮ್ಮದಿಗೆ ಕೋಟಿ ನಮನಗಳು,ನನ್ನ ಎದೆಯ ಮೇಲೆ ನೀನು,ನಿನ್ನ ಬಿಸಿಯಪ್ಪುಗೆ,ಚಂದದ ತುಟಿಯ ಜೇನು, ದೊರಕೀತೆಂಬ ಆಸೆ, ನನ್ನ ಎದೆ,ಭುಜ ನಿನಗಾಸರೆ ಸದಾ!ನಾ ನಿನ್ನವ ಇಂದೂ,ಎಂದೆಂದೂ!!!

ಬೆನೆಡಿಕ್ಟಸ್ "ಬೆನ್ನಿ" ಹಿನ್

ಬೆನೆಡಿಕ್ಟಸ್ "ಬೆನ್ನಿ" ಹಿನ್ (ಜನನ: ೧೯೫೩), ಅಮೆರಿಕದಲ್ಲಿ ವಾಸಿಸುವ ಮೂಲತಃ ಆರ್ಮೇನಿಯಾದ ಕ್ರೈಸ್ತ ಪಾದ್ರಿ. ಇವರು ಹುಟ್ಟಿದ್ದು ಜೆರುಸಲೆ೦ ನಲ್ಲಿ.
೯೦ ರ ದಶಕದಲ್ಲಿ ತಮ್ಮ ಟಿವಿ ಕಾರ್ಯಕ್ರಮ "ದಿಸ್ ಇಸ್ ಯುವರ್ ಡೇ" (ಇದು ನಿಮ್ಮ ದಿನ) ದ ಮೂಲಕ ಬೆನ್ನಿ ಹಿನ್ ಪ್ರಸಿದ್ಧರಾದರು. ಈ ಕಾರ್ಯಕ್ರಮದಲ್ಲಿ ಬೆನ್ನಿ ಹಿನ್ ಅವರು ಕಾಹಿಲೆ ಬ೦ದ ವ್ಯಕ್ತಿಗಳನ್ನು ಸ್ಪರ್ಶದ ಮೂಲಕ ಗುಣಪಡಿಸುವ ಸಾಮರ್ಥ್ಯವನ್ನು ಹೊ೦ದಿರುವುದಾಗಿ ಹೇಳುತ್ತಿದ್ದರು, ಮತ್ತು ಇದನ್ನು ತೋರಿಸುವುದಕ್ಕೆ ಕೆಲ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡಲಾಯಿತು. ಈ ರೀತಿಯ ಗುಣಪಡಿಸುವಿಕೆ ಸಾಕಷ್ಟು ವಿವಾದವನ್ನು ಸೃಷ್ಟಿಸಿ ಬೆನ್ನಿ ಹಿನ್ ಆಗಾಗ ಹಳದಿ ಪತ್ರಿಕೆಗಳಲ್ಲಿ ಬರಲಾರ೦ಭಿಸಿದರು. ಇತ್ತೀಚೆಗೆ ಬೆನ್ನಿ ಹಿನ್ ಅಮೆರಿಕದ ಸ೦ಯುಕ್ತ ಸ೦ಸ್ಥಾನ ಮತ್ತು ಪ್ರಪ೦ಚದ ವಿವಿಧೆಡೆಗಳಲ್ಲಿ ಸ೦ಚರಿಸುತ್ತಾರೆ.
ಅನೇಕ ದೇಶಗಳ ಕ್ರೈಸ್ತ ಸಮುದಾಯಗಳಲ್ಲಿ ಬೆನ್ನಿ ಹಿನ್ ಸಾಕಷ್ಟು ವಿವಾದಾಸ್ಪದ ವ್ಯಕ್ತಿಯಾಗಿದ್ದಾರೆ. ಅವರು ನಿಜಕ್ಕೂ ದೇವರ ಮನುಷ್ಯರು ಎ೦ದು ಕೆಲವರು ನ೦ಬಿದರೆ, ಇತರರು ಹೇಳುವ೦ತೆ ಅದು ನಿಜವಲ್ಲ. ಇನ್ನು ಕೆಲವರು ಬೆನ್ನಿ ಹಿನ್ ರ ಹೇಳಿಕೆಗಳನ್ನು ಧರ್ಮಬಾಹಿರ ಎ೦ದು ಘೋಷಿಸಿದ್ದಾರೆ.
ಡಿಸ೦ಬರ್ ೩೧, ೧೯೮೯ ರ೦ದು ಬೆನ್ನಿ ಹಿನ್ "ಆರ್ಲ್ಯಾ೦ಡೋ ಕ್ರೈಸ್ತ ಕೇ೦ದ್ರ" ಎ೦ಬ ತಮ್ಮ ಚರ್ಚ್ ನಲ್ಲಿ ಕೆಲವು ಭವಿಷ್ಯವಾಣಿಗಳನ್ನು ಘೋಷಿಸಿದರು. ಇವುಗಳಲ್ಲಿ ಎಲ್ಲವೂ ನಿಜವಾಗಿಲ್ಲ (ಉದಾ: ಕ್ಯೂಬಾ ದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ೯೦ ರ ದಶಕದಲ್ಲಿ ನಿಧನರಾಗುವರೆ೦ದು ಬೆನ್ನಿ ಹಿನ್ ಹೇಳಿಕೆಯನ್ನಿತ್ತಿದ್ದರು).
ನವ೦ಬರ್ ೯, ೨೦೦೪ ರ೦ದು ಕೆನಡಾ ದ ಒ೦ದು ಟಿವಿ ಚಾನಲ್ ಬೆನ್ನಿ ಹಿನ್ ರನ್ನು ಟೀಕಿಸಿ ಒ೦ದು ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಬೆನ್ನಿ ಹಿನ್ ರವರು ಭಕ್ತರನ್ನು ಮೋಸಗೊಳಿಸಲು ಅನೇಕ ಚಟುವಟಿಕೆಗಳನ್ನು ನಡೆಸಿದ್ದಾರೆ ಎ೦ದು ಈ ಕಾರ್ಯಕ್ರಮ ತೋರಿಸಿತು. ಬೆನ್ನಿ ಹಿನ್ ರವರ ಚರ್ಚ್ ಈ ಕಾರ್ಯಕ್ರಮಕ್ಕೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.
ಇತ್ತೀಚೆಗೆ (ಜನವರಿ ೨೧-೨೩) ಬೆ೦ಗಳೂರಿನಲ್ಲಿ ಬೆನ್ನಿ ಹಿನ್ "ಭಾರತಕ್ಕಾಗಿ ಪ್ರಾರ್ಥಿಸಿ" ಎ೦ಬ ಕಾರ್ಯಕ್ರಮವನ್ನು ಹಮ್ಮಿಕೊ೦ಡಿದ್ದಾರೆ. ಇದೂ ಸಹ ಬಹಳ ವಿವಾದವನ್ನು ಸೃಷ್ಟಿಸಿದೆ.

ಕೃಷ್ಣ,ಮತ್ತು ಕ್ರಿಸ್ತನಿಗೆ ಇರುವ ವತ್ಯಾಸಗಳು .

ಕೃಷ್ಣ,ಮತ್ತು ಕ್ರಿಸ್ತನಿಗೆ ಇರುವ ವತ್ಯಾಸಗಳು ...ನನ್ನ ಪ್ರಕಾರ
ದಯವಿಟ್ಟು ಓದಿ ನಿಮ್ಮ ಅಬಿಪ್ರಾಯ ತಿಳಿಸಿ...
(ವಿಶ್ಲೇಷಣೆ ಮತ್ತು ಬರಹಗಾರರು :-ನಿಮ್ಮ ನಾರಾಯಣ ಗೌಡ )

. ಕೃಷ್ಣಾಷ್ಟಮಿ ಮತ್ತು ಕ್ರಿಸ್ಮಸ್ ಎರಡೂ ಸಂಭ್ರಮದ ಹಬ್ಬಗಳು. ಈ ಎರಡೂ ಭಗವದ್ ಅವತಾರಗಳ ಜೀವನ ಮತ್ತು ಸಂದೇಶಗಳಲ್ಲಿ ಅನೇಕ ಸಾಮ್ಯಗಳಿವೆ. ಕೆಲವು ಕುತೂಹಲಕಾರಿ ಹೋಲಿಕೆಗಳನ್ನು ಪಟ್ಟಿಮಾಡಿದ್ದೇನೆ. ಗಮನಿಸೋಣ. ಈ ಎರಡೂ ಅದ್ಭುತ ಅವತಾರಗಳೂ ಪೌರಾತ್ಯ ಜಗತ್ತಿನಿಂದ ಉಗಮಿಸಿದ್ದು. ಇವರೀರ್ವರ ತಂದೆ ತಾಯಂದಿರೂ ಧರ್ಮನಿಷ್ಠ ದೈವ

ಭಕ್ತರು. ಯಾದವ ಕೃಷ್ಣ ಸೆರೆಮನೆಯಲ್ಲಿ ಜನಿಸಿದರೆ, ಯೇಸು ಕ್ರಿಸ್ತನ ಜನನ ಕೊಟ್ಟಿಗೆಯಲ್ಲಾಯಿತು. ಬಾಲಕ ಕೃಷ್ಣನಿಗೆ ರಾಜ ಕಂಸನ ಕಾಟವಾದರೆ, ಬಾಲಯೇಸುವಿಗೆ ರಾಜ ಹೆರೋಡ್‌ನ ಕಾಟ! ಕೃಷ್ಣ ಗೊಲ್ಲನಾಗಿ ತನ್ನ ಲೀಲೆಗಳನ್ನು ತೋರಿದರೆ, ಯೇಸು ಕುರುಬನಾಗಿ ಪವಾಡಗಳನ್ನು ಮಾಡಿದ. ಅಜ್ಞಾನದ ಸಂಕೇತವಾದ ಕಾಳಿಯನ್ನು ಕೃಷ್ಣ ಜಯಿಸಿದರೆ ಯೇಸು ಸೈತಾನನನ್ನು ಜಯಿಸುತ್ತಾನೆ. ತನ್ನ ಭಕ್ತರನ್ನು ಕೊಂಡೊಯ್ಯುತ್ತಿದ್ದ ಹಡಗನ್ನು ಬಿರುಗಾಳಿಯಿಂದ ಯೇಸು ರಕ್ಷಿಸಿದರೆ, ವಿನಾಶಕಾರಿ ಮಳೆಯಿಂದ ತನ್ನ ಭಕ್ತರನ್ನು ರಕ್ಷಿಸಲು ಗೋವರ್ಧನ ಗಿರಿಯನ್ನೇ ಕೃಷ್ಣ ಎತ್ತಿ ಹಿಡಿಯುತ್ತಾನೆ. ಇಹಲೋಕದ್ದಲ್ಲದಿದ್ದರೂ ಯಹೂದ್ಯರ ರಾಜನೆಂದು ಯೇಸು ಕರೆಸಿಕೊಂಡರೆ, ಕೃಷ್ಣ ಇಹ ಮತ್ತು ಪರಗಳೆರಡರ ಒಡೆಯ. ಯೇಸುವಿನ ಸಂದೇಶ ಸಾರಲು ಮೇರಿ, ಮಾರ್ತ ಮತ್ತು ಮೇರಿ ಮಗ್ದಲೀನ್ ಎಂಬ ಮಹಿಳಾ ಭಕ್ತರಿದ್ದರೆ, ಕೃಷ್ಣನ ಜೀವನದಲ್ಲಿ ರಾಧೆ ಮತ್ತು ಇತರೆ ಗೋಪಿಯರು ಪವಿತ್ರವಾದ ಪಾತ್ರವನ್ನು ವಹಿಸುತ್ತಾರೆ. ಯೇಸು ಕ್ತಿಸ್ತನನ್ನು ಶಿಲುಬೆಗೆ ಮೊಳೆ ಹೊಡೆದು ಏರಿಸಲ್ಪಟ್ಟರೆ, ಕೃಷ್ಣ ಬೇಡನೊಬ್ಬನ ಬಾಣದಿಂದ ಪ್ರಾಣಾಂತಕವಾಗಿ ಗಾಯಗೊಳ್ಳುತ್ತಾನೆ. ಈ ಎರಡೂ ಅವತಾರಗಳ ಬಗ್ಗೆ ಧರ್ಮಗ್ರಂಥಗಳಲ್ಲಿ ಭವಿಷ್ಯವಾಣಿ ಹೇಳಲ್ಪಟ್ಟಿತ್ತು. ಈ ಅವತಾರಗಳನ್ನು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮಗಳಲ್ಲಿ ಅತ್ಯುನ್ನತ ದೈವೀ ಪುರುಷರೆಂದು ಪರಿಗಣಿಸಲಾಗಿದೆ. ಯೇಸು ಕ್ರಿಸ್ತ ಮತ್ತು ಭಗವಾನ್ ಕೃಷ್ಣ ಪ್ರಪಂಚಕ್ಕೆ ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ಪವಿತ್ರ ಗ್ರಂಥಗಳನ್ನು ನೀಡಿದ್ದಾರೆ. ಭಗವದ್ಗೀತೆಯಲ್ಲಿನ ಶ್ರೀ ಕೃಷ್ಣನ ಉಪದೇಶವೂ ಯೇಸು ಸ್ವಾಮಿಯ ಹೊಸ ಒಡಂಬಡಿಕೆಯಲ್ಲಿನ ಸಂದೇಶವೂ ಪಾರಮಾರ್ಥಿಕ ಸತ್ಯದ ಅಭಿವ್ಯಕ್ತಿಯಾಗಿದೆ. ಈ ಎರಡೂ ಪವಿತ್ರ ಗ್ರಂಥಗಳೂ ಮೂಲತಃ ಒಂದೇ ತತ್ವವನ್ನು ಬೋಧಿಸುತ್ತವೆ. ಕ್ರಿಸ್ತ ಬೋಧಿಸಿದ ಗಹನವಾದ ಧರ್ಮ ಈಗ ಕಣ್ಮರೆಯಾಗಿದೆ ಎಂದು ನನ್ನ ಭಾವನೆ. ಕೃಷ್ಣನಂತೆ ಯೇಸುವೂ ಯೋಗವನ್ನು ತನ್ನ ಅನುಯಾಯಿಗಳಿಗೆ ಕಲಿಸಿಕೊಟ್ಟಿದ್ದ
ದೇವರೊಂದು ನಾಮ ಹಲವು ಹೇಗೆ ....ಎಂದು ಮುಂದೆ ಹೇಳುತ್ತೇನೆ.